ನದಿಯಲ್ಲಿ ಮುಳುಗಿ ಬಾಲಕನ ಸಾವು

ಹೂವಿನಹಡಗಲಿ, ಮಾ.11-  ಕುರುವತ್ತಿ ಜಾತ್ರೆಗೆ  ಬಂದಿದ್ದ ಬ್ಯಾಡಗಿ ತಾಲ್ಲೂಕು ಬಿಸಲಹಳ್ಳಿ ಗ್ರಾಮದ  13 ವರ್ಷದ  ಬಾಲಕ ಮನು ಮುಚ್ಚಟ್ಟಿ  ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. 

ಚಿಕ್ಕ ಕುರುವತ್ತಿ ಭಾಗದಲ್ಲಿ ಸಂಬಂಧಿಕರ ಜೊತೆ ನದಿಗೆ ಸ್ನಾನ ಮಾಡಲು ಬಂದಿದ್ದ   ವೇಳೆ ಬೋಟಿನ ಗುಂಡಿಗೆ ಸಿಲುಕಿದ ಬಾಲಕ ಮೃತಪಟ್ಟಿದ್ದಾನೆ. ಘಟನೆ ನಡೆಯುತ್ತಿದ್ದ ಹಾಗೆ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಈ ಸ್ಥಳದಲ್ಲಿ ಅಪಾಯವಿರುವ ಬಗ್ಗೆ ತಾಲ್ಲೂಕು ಆಡಳಿತ ನಾಮಫಲಕ ಹಾಕಬೇಕಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ ಎಂದು ದೂರಿದ್ದಾರೆ. ಬಾಲಕನ ತಂದೆ ಮಹಾಂತೇಶ ಮುಚ್ಚಟ್ಟಿ ಅವರು ಬ್ಯಾಡಗಿ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ. ಇವರಿಗೆ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಇದ್ದರು ಎಂದು ತಿಳಿದುಬಂದಿದೆ. ರಾಣೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

error: Content is protected !!