10 ರಂದು ಜಾಹ್ನವಿ ಅವರ ಪುಸ್ತಕ ಬಿಡುಗಡೆ, ರಂಗ ಪ್ರಸ್ತುತಿ

10 ರಂದು ಜಾಹ್ನವಿ ಅವರ  ಪುಸ್ತಕ ಬಿಡುಗಡೆ,  ರಂಗ ಪ್ರಸ್ತುತಿ

ದಾವಣಗೆರೆ, ಫೆ. 6-  ವಿದ್ಯಾನಗರ ಕನ್ನಡ ಭವನದಲ್ಲಿ ಇದೇ ದಿನಾಂಕ 10.02.2024ರ ಶನಿವಾರ ಬಿ.ಟಿ.  ಜಾಹ್ನವಿ ಅವರ ಸಮಗ್ರ ಕಥಾ ಸಂಕಲನ `ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ’  ಪುಸ್ತಕ ಬಿಡುಗಡೆ ಮತ್ತು ಕೆ.ವಿ. ಅಕ್ಷರ ಹೆಗ್ಗೋಡು ಇವರ ಮಾರ್ಗದರ್ಶನದಲ್ಲಿ ವಿದ್ಯಾ ಅಕ್ಷರ ಮತ್ತು ವಾಣಿ ಸತೀಶ್ ಇವರಿಂದ `ದೂಪ್ದಳ್ಳಿ ಸೆಕ್ಸಿ ದುರುಗ’ ರಂಗ ಪ್ರಸ್ತುತಿ ನಡೆಯಲಿದೆ. ಮಾನವ ಬಂಧುತ್ವ ವೇದಿಕೆಯ ರಾಜ್ಯ ಘಟಕದ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಮೈಸೂರಿನ ಸಾಹಿತಿ ಜಿ.ಪಿ. ಬಸವರಾಜು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಲೇಖಕರು ಹಾಗೂ ಪ್ರಾಧ್ಯಾಪಕ ತುಮಕೂರಿನ ಡಾ. ರವಿಕುಮಾರ ನೀಹ ಪುಸ್ತಕ ಕುರಿತು ಮಾತನಾಡಲಿದ್ದು, ಕತೆಗಾರ್ತಿ ಬಿ.ಟಿ. ಜಾಹ್ನವಿ ಅವರ ಉಪಸ್ಥಿತಿಯಲ್ಲಿ ಸಾಹಿತಿ ಸೌಮ್ಯ ಕೋಡೂರು, ಕೌದಿ ಪ್ರಕಾಶನದ ಡಾ. ಮಮತ ಅತಿಥಿಗಳಾಗಿ ಉಪಸ್ಥಿತರಿರುವರು.

error: Content is protected !!