ವಿಪಕ್ಷಗಳ ತಿರಸ್ಕರಿಸಿದ ಮತದಾರ : ಶಿವಶಂಕರ್

ವಿಪಕ್ಷಗಳ ತಿರಸ್ಕರಿಸಿದ ಮತದಾರ : ಶಿವಶಂಕರ್

ದಾವಣಗೆರೆ, ಡಿ. 3 –  ಮಧ್ಯಪ್ರದೇಶ, ರಾಜಸ್ಥಾನ ಹಾಗೂ  ಛತ್ತೀಸ್‌ಘಡ  ರಾಜ್ಯಗಳ  ಚುನಾವಣೆಗಳಲ್ಲಿ  ಬಿಜೆಪಿ   ಅಭೂತಪೂರ್ವ ಗೆಲುವಿಗೆ  ಜಿಲ್ಲಾ ಬಿಜೆಪಿ ಹರ್ಷ ವ್ಯಕ್ತಪಡಿಸುತ್ತದೆ ಎಂದು  ಜಿಲ್ಲಾ ಬಿಜೆಪಿ ವಕ್ತಾರ ಡಿಎಸ್ ಶಿವಶಂಕರ್  ತಿಳಿಸಿದ್ದಾರೆ. 

ಈ ಗೆಲುವು ಬಿಜೆಪಿ ಸಿದ್ಧಾಂತಗಳ ಗೆಲುವು, ಪ್ರಧಾನಿ ಮೋದಿ ಅವರ ಜನಪರ ಯೋಜನೆಗಳ ಗೆಲುವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಮುನ್ಸೂಚನೆಯಾಗಿದೆ ಮತ್ತು ವಿರೋಧ ಪಕ್ಷಗಳನ್ನು ಮತದಾರ ತಿರಸ್ಕರಿಸಿದ್ದಾನೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

error: Content is protected !!