ಮೂವರು ಬಾಲ, ಕಿಶೋರ ಕಾರ್ಮಿಕರ ಪತ್ತೆ

ದಾವಣಗೆರೆ, ಡಿ. 3-  ನಗರದಲ್ಲಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಹಾಗೂ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ ಕುರಿತು ವಿವಿಧ ಅಂಗಡಿ, ಹೋಟೆಲ್, ಗ್ಯಾರೇಜ್ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿದ ಕಾರ್ಮಿಕ ಅಧಿಕಾರಿಗಳು ತಪಾಸಣೆ ನಡೆಸಿದರು.  ಮಾಲೀಕರಿಗೆ ಕರಪತ್ರ ಮತ್ತು ಸ್ಟಿಕ್ಕರ್ಸ್ ನೀಡಿ ಜಾಗೃತಿ ಮೂಡಿಸಿದರು.  ಈ ತಪಾಸಣೆಯಲ್ಲಿ  ಓರ್ವ ಬಾಲಕಾರ್ಮಿಕ ಹಾಗೂ ಇಬ್ಬರು ಕಿಶೋರ ಕಾರ್ಮಿಕರು    ಪತ್ತೆಯಾಗಿದ್ದು. ಅವರನ್ನು ಕೆಲಸದಿಂದ ಬಿಡುಗಡೆಗೊಳಿಸಿ,  ಮಾಲೀಕರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.   ಕಾರ್ಯಾಚರಣೆ ಯಲ್ಲಿ ಕಾರ್ಮಿಕ ನಿರೀಕ್ಷಕರಾದ ರಾಜಶೇಖರ ಹಿರೇಮಠ, ರಾಜಪ್ಪ. ಟಿ, ಆರ್.ನಾಗೇಶ್ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು, ಯೋಜನಾ ನಿರ್ದೇಶಕರು ಪ್ರಸನ್ನ ಇ.ಎನ್ ಉಪಸ್ಥಿತರಿದ್ದರು.

error: Content is protected !!