ಆವರಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇಂದು ಮತ್ತು ನಾಳೆ ಸಂಜೆ 6.30 ಕ್ಕೆ ಶಿವಸಂಚಾರ ನಾಟಕೋತ್ಸವ-2023 ನಡೆಯಲಿದೆ.
ದಿವ್ಯ ಸಾನ್ನಿಧ್ಯವನ್ನು ಶ್ರೀ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿ ವಹಿಸುವರು. ಕಾರ್ಯಕ್ರಮವನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕಕ್ಕರಗೊಳ್ಳದ ಪರಮೇಶ್ವರಪ್ಪ, ದಾದಾಪೀರ್ ನವಿಲೇಹಾಳ್, ಕೆ.ಬಿ. ಕೊಟ್ರೇಶ್, ವೀಣಾ ಮಂಜುನಾಥ್, ಆರ್.ಜಿ. ಹಳ್ಳಿ ಸುರೇಂದ್ರ ಆಗಮಿಸುವರು. ಅಧ್ಯಕ್ಷತೆಯನ್ನು ಜಯ್ಯಮ್ಮ ಗೋಪಿನಾಯ್ಕ ವಹಿಸುವರು. ಕಾರ್ಯಕ್ರಮದಲ್ಲಿ ಇಂದು `ಜೊತೆಗಿರುವನು ಚಂದಿರ’, ನಾಳೆ `ತಾಳಿಯ ತಕರಾರು’ ಮತ್ತು 20 ರಂದು `ಕಲ್ಯಾಣದ ಬಾಗಿಲು’೦ ನಾಟಕಗಳು ಪ್ರದರ್ಶನಗೊಳ್ಳುವವು.