ದಾವಣಗೆರೆ, ಅ. 26- ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಮಾಜಿ ಸಚಿವ ರಾಮದಾಸ್ ಹೇಳಿದರು.
ಪಂಚರಾಜ್ಯಗಳ ಚುನಾವಣೆ ಮೇಲೆ ಕೇಂದ್ರ ನಾಯಕರು ಗಮನ ಹರಿಸುತ್ತಿದ್ದರಿಂದ ಆಯ್ಕೆ ಪ್ರಕ್ರಿಯೆ ವಿಳಂಬವಾಗಿದೆ ಎಂದು ಸ್ಪಷ್ಟಪಡಿಸಿದರು.
ಇಂಡಿಯಾ ಎನ್ನುವುದು ಬ್ರಿಟಿಷರು ಬಿಟ್ಟು ಹೋದ ಹೆಸರು. ಈಗ ಆ ಹೆಸರು ಬೇಡ ಎಂದು ಹೇಳಿದ್ದಾರೆ. ಭಾರತ ಎನ್ನುವುದು ಗರ್ವದ ವಿಚಾರ. ದೇಶ ಪ್ರೇಮವನ್ನು ಹುಟ್ಟಿಸುವ ಕೆಲಸ ಪಠ್ಯ ಪುಸ್ತಕಗಳಲ್ಲಿ ಇರಬೇಕು. ಅಲೆಕ್ಸಾಂಡರ್ ದಿ ಗ್ರೇಟ್ ಎಂದು ನಾವು ಮಕ್ಕಳಿಗೆ ಹೇಳಿ ಕೊಡುತ್ತೇವೆ. ಅವನನ್ನು ಸೋಲಿಸಿದವರು ಸಾಮಾನ್ಯ ಖುಷಿ ಅವನಿಂದ ಪರಿವರ್ತನೆಯಾದ ಅಂತಹ ಇತಿಹಾಸ ವನ್ನು ತಿಳಿಸುವ ಕೆಲಸವನ್ನು ಪಠ್ಯ ಪುಸ್ತಕಗಳು ಮಾಡಬೇಕು ಎಂದು ರಾಮದಾಸ್ ಹೇಳಿದರು.