ಉತ್ತರ ಕ್ಷೇತ್ರದಲ್ಲಿ `ಕಮಲ’ ಅರಳಲಿದೆ

ಉತ್ತರ ಕ್ಷೇತ್ರದಲ್ಲಿ `ಕಮಲ' ಅರಳಲಿದೆ - Janathavaniದಾವಣಗೆರೆ, ಮೇ 10- ಪ್ರಚಾ ರದ ವೇಳೆ ಬಿಜೆಪಿ ಪರ ಅಭೂತ ಪೂರ್ವ ಬೆಂಬಲ ದೊರೆತಿದ್ದು, ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು `ಕಮಲ’ ಅರಳಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದರು.

 ವಿದ್ಯಾನಗರ ವಿನಾಯಕ ಬಡಾವಣೆಯಲ್ಲಿರುವ ರಿಕ್ರಿಯೇಷನ್ ಕ್ಲಬ್‌ನ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವರ ವಿರುದ್ಧ ನನ್ನಂತಹ ಸಾಮಾನ್ಯ ಕಾರ್ಯಕರ್ತರನ್ನು ಬಿಜೆಪಿ ಕಣಕ್ಕಿಳಿಸಿದೆ. ನಮ್ಮ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂದರು.

ಉತ್ತರ ಕ್ಷೇತ್ರದ ಮತದಾರರು ಪ್ರಬುದ್ಧರಿದ್ದಾರೆ. ಉತ್ತಮರನ್ನೇ ಆಯ್ಕೆ ಮಾಡುತ್ತಾರೆಂಬ ನಂಬಿಕೆ ನನ್ನದು ಎಂದು ಹೇಳಿದರು.

error: Content is protected !!