ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ಎಲ್ಲಿಯೂ ಇಲ್ಲ: ಎಸ್ಸೆಸ್

ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ಎಲ್ಲಿಯೂ ಇಲ್ಲ: ಎಸ್ಸೆಸ್ - Janathavaniದಾವಣಗೆರೆ, ಮೇ 10- ರಾಜ್ಯ ಬಿಜೆಪಿ ಭ್ರಷ್ಠಾಚಾರದಿಂದ ಜನರು ಬೇಸತ್ತಿದ್ದು, ರಾಜ್ಯ ದೆಲ್ಲೆಡೆ ಕಾಂಗ್ರೆಸ್ ಪಕ್ಷಕ್ಕೆ ಮತದಾರರ ಒಲವಿದೆ. ಎಲ್ಲೂ ಕೂಡ ಕಾಂಗ್ರೆಸ್ ಜೊತೆ ತೀವ್ರ  ಪೈಪೋಟಿ ಇಲ್ಲ ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಹೇಳಿದರು. ನಗರದ ಎಂಸಿಸಿ ಬಿ ಬ್ಲಾಕ್‌ ನ ಐಎಂಎ ಹಾಲ್‌ ನಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಮತಗಟ್ಟೆಯಲ್ಲಿ ಯಾವಾಗಲೂ ಕಡಿಮೆ ಮತದಾನ ಆಗುತ್ತಿತ್ತು. ಈ ಬಾರಿ ಮಧ್ಯಾಹ್ನದ ವೇಳೆಗೆ ಶೇ. 40 ರಷ್ಟು ಮತದಾನವಾಗಿದೆ ಎಂದರು.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಒಂದು ಮತದ ಅಂತರದಲ್ಲಿ ಗೆದ್ದರೂ ನಮ್ಮ ಗೆಲುವು ನಮ್ಮದೇ,  50 ಸಾವಿರ ಅಂತರದಿಂದ ಗೆದ್ದರೂ ಗೆಲುವೇ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್, ಪತ್ನಿ ಪ್ರಭಾ ಮಲ್ಲಿಕಾರ್ಜುನ್, ಮೊಮ್ಮಕ್ಕಳಾದ ಸಮರ್ಥ್, ಶ್ರೇಷ್ಠ ಮತ್ತಿತರರಿದ್ದರು.

error: Content is protected !!