ಶ್ರೀ ವಿನಾಯಕ ಎಜುಕೇಷನ್ ಟ್ರಸ್ಟ್‌ನಿಂದ ಅಥಣಿ ವೀರಣ್ಣ ಅವರಿಗೆ ಅಭಿನಂದನೆ

ಶ್ರೀ ವಿನಾಯಕ ಎಜುಕೇಷನ್ ಟ್ರಸ್ಟ್‌ನಿಂದ ಅಥಣಿ ವೀರಣ್ಣ ಅವರಿಗೆ ಅಭಿನಂದನೆ

ದಾವಣಗೆರೆ, ಮಾ. 7-ದಾವಣಗೆರೆ ವಿಶ್ವವಿದ್ಯಾನಿಲಯದ ವತಿಯಿಂದ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಭಾಜನರಾಗಿರುವ ಲೆಕ್ಕ ಪರಿಶೋಧಕರೂ ಆಗಿರುವ ಶ್ರೀ ವಿನಾಯಕ ಎಜುಕೇಷನ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಅಥಣಿ ವೀರಣ್ಣ ಅವರಿಗೆ ಶ್ರೀ ವಿನಾಯಕ ಎಜುಕೇಷನ್ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ಎಂ.ಹೆಚ್. ನಿಜಾನಂದ, ಕಾರ್ಯದರ್ಶಿ ಎನ್.ಎ. ಮುರುಗೇಶ್, ಟ್ರಸ್ಟಿಗಳಾದ ಎಸ್.ಎಸ್. ಮಲ್ಲಿಕಾರ್ಜುನ್, ಬಿ.ಸಿ. ಉಮಾಪತಿ, ಆರ್. ರಮಾನಂದ, ಆರ್. ವೆಂಕಟರೆಡ್ಡಿ, ಕೆ.ಜಿ. ಸುಗಂಧರಾಜ್, ಬಿ.ಸಿ. ಶಿವಕುಮಾರ್, ಎಂ. ಮಹೇಶ್ಚಂದ್ರಬಾಬು, ಎಸ್.ಕೆ. ವೀರಣ್ಣ, ಐ.ಪಿ. ಏಕೋರಾಮಾರಾಧ್ಯ, ಎ.ಕೆ. ಪ್ರಶಾಂತ್, ಎಂ.ವಿ. ವೀರೇಂದ್ರ, ಎ.ವಿ. ಪ್ರಸಾದ್, ಡಾ. ಹೆಚ್.ಬಿ. ಮೋಹನ್ ಹಾಗೂ ಟ್ರಸ್ಟ್‌ನ ಆಶ್ರಯದಲ್ಲಿ ನಡೆಯುವ ಗುಂಡಿ ನರ್ಸರಿ ಶಾಲೆ, ಪಿ.ಎಸ್. ಪ್ರಾಥಮಿಕ ಶಾಲೆ, ಅಥಣಿ ಪ್ರೌಢಶಾಲೆ, ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಎಸ್‌ಬಿಸಿ ಪ್ರಥಮ ದರ್ಜೆ ಕಾಲೇಜು ಅಥಣಿ ಸ್ನಾತಕೋತ್ತರ ಕೇಂದ್ರ, ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು, ಅಧ್ಯಾಪಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!