ಯೋಗಾಸನ ಸ್ಪರ್ಧೆ : ಹರಿಹರದ ಸೃಷ್ಠಿಗೆ ಪ್ರಥಮ ಸ್ಥಾನ

ಯೋಗಾಸನ ಸ್ಪರ್ಧೆ : ಹರಿಹರದ ಸೃಷ್ಠಿಗೆ ಪ್ರಥಮ ಸ್ಥಾನ

ದಾವಣಗೆರೆ, ಫೆ. 21- ಇತ್ತೀಚಿಗೆ ಕೊಟ್ಟೂರಿನ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ನಡೆದ ಕ್ರೀಡಾಕೂಟದಲ್ಲಿ ಯೋಗಾಸನ ಸ್ಪರ್ಧೆ ಯಲ್ಲಿ ಹರಿಹರದ ಏಳನೇ ತರಗತಿ ವಿದ್ಯಾರ್ಥಿನಿ ಕೆ.ವೈ. ಸೃಷ್ಠಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಡಾ. ಶಿವಮೂರ್ತಿ ಶಿವಾಚಾರ್ಯ  ಸ್ವಾಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದು, ದಾವಣ ಗೆರೆ ಇಪ್ಟಾ ಕಲಾ ತಂಡದ ಕಲಾವಿದೆ ಶಾಂಭವಿ ಅವರ ಪುತ್ರಿ. ಎಳೆಯ ವಯಸ್ಸಿನಲ್ಲಿಯೇ ನೇಪಾಳದ ಕಠ್ಮಂಡುವಿನಲ್ಲಿ ಸತತ ಸೂರ್ಯ ಪಾನ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುಮಾನ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು. ಮೈಸೂರು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ ಅತ್ಯುತ್ತಮ `ಯೋಗ ಸೇವಾ ರತ್ನ’ ಪ್ರಶಸ್ತಿಯನ್ನೂ ಸಹ ಪಡೆದಿದ್ದಾರೆ.

error: Content is protected !!