ಕಡು ಬಡವರಿಗೆ ಸೈಕಲ್‌ ವಿತರಣೆ

ಕಡು ಬಡವರಿಗೆ ಸೈಕಲ್‌ ವಿತರಣೆ

ದಾವಣಗೆರೆ, ಫೆ. 12- ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಅತ್ಯಂತ ಕಡು ಬಡವರಿಗೆ, ವಿದ್ಯಾರ್ಥಿಗಳಿಗೆ ಮತ್ತು ಕೂಲಿ ಕಾರ್ಮಿಕರಿಗೆ ಹತ್ತು ಸೈಕಲ್‌ಗಳನ್ನು ವಿತರಿಸಲಾಯಿತು. ಸೈಕಲ್‌ಗಳಿಗೆ ಧನ ಸಹಾಯ ನೀಡಿದ ದಾನಿಗಳಾದ ಜಿ.ಪಂ. ನಿವೃತ್ತ ಕಾರ್ಯದರ್ಶಿ ಆರ್.ಆರ್. ಕುಸಗೂರು, ದಂತ ವೈದ್ಯ ಡಾ. ಬಸಪ್ಪ, ಶ್ರೀಮತಿ ವಿಮಲಮ್ಮ ಅತಿಥಿಗಳಾಗಿ ಆಗಮಿಸಿದ್ದರು.

ಟ್ರಸ್ಟಿನ ನಿರ್ದೇಶಕರುಗಳಾದ ಎನ್.ಪಿ. ಜಯಣ್ಣ, ಶ್ರೀಮತಿ ಮಂಜುಳಾ ಬಸವಲಿಂಗಪ್ಪ ಮತ್ತು ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಉಪಸ್ಥಿತರಿದ್ದರು. 

ಕರುಣಾ ಜೀವ ಕಲ್ಯಾಣ ಟ್ರಸ್ಟ್ ಮುಂದಿನ ದಿನಗಳಲ್ಲಿ 200 ಸೈಕಲ್ ಗಳನ್ನು ವಿತರಿಸುವ ಗುರಿ ಹೊಂದಿದ್ದು, ಹೊಸ ಸೈಕಲ್‌ಗೆ 7 ಸಾವಿರ ರೂ. ಮತ್ತು ಹಳೆಯ ಸೈಕಲ್‌ಗೆ 3 ಸಾವಿರ ರೂ. ಧನ ಸಹಾಯ ಮಾಡಿ ಸಹಕರಿಸಬೇಕಾಗಿ ವಿನಂತಿ.  ತಮ್ಮಲ್ಲಿ ಉಪಯೋಗಿಸದೆ ಹಾಗೆಯೇ ಉಳಿದಿರುವ ಹಳೆಯ ಸೈಕಲ್ ಗಳನ್ನು ದಾನ ಮಾಡುವ ಮೂಲಕ ಬಡವರ ಜೀವನ ನಿರ್ವಹಣೆಗೆ ಸಹಕರಿಸಬೇಕಾಗಿ ವಿನಂತಿ. ಸಹೃದಯಿ ದಾನಿಗಳು ಸಂಪರ್ಕಿಸಿ : 95380 24422.

error: Content is protected !!