ಹರಿಹರ ತಾಲ್ಲೂಕು ಹನಗವಾಡಿ ಗ್ರಾಮದ ಶ್ರೀ ವೀರ ಭದ್ರೇ ಶ್ವರ ಸ್ವಾಮಿಯ ರಥೋ ತ್ಸವವು ಇಂದು ಸಂಜೆ 5.30ಕ್ಕೆ ಜರುಗಲಿದೆ. ನಾಳೆ ಗುರುವಾರ ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 12.30 ರವರೆಗೆ ಶ್ರೀ ಸ್ವಾಮಿಯ ಗುಗ್ಗಳ ಕಾರ್ಯಕ್ರಮವು ಶ್ರೀ ವೀರಭದ್ರೇಶ್ವರ ವೀರಗಾಸೆ ತಂಡದವರಿಂದ ಪುರವಂತರು, ಸಮಾಳದವರು ಹಾಗೂ ವಿವಿಧ ಮೇಳಗಳಿಂದ ಸಾಗಿ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಂತ್ಯಗೊಳ್ಳಲಿದೆ.
ಗುರುವಾರ ರಾತ್ರಿ 9.30 ಗಂಟೆಗೆ ಶ್ರೀ ರೇವಣಸಿದ್ದೇಶ್ವರ ನಾಟ್ಯ ಕಲಾ ಸಂಘದವರಿಂದ ಹೆಚ್.ಕೆ.ಮಲ್ಲಿಕಾರ್ಜುನ್ ವಿರಚಿತ `ಸಾವು ತಂದ ಸೌಭಾಗ್ಯ’ ನಾಟಕ ಪ್ರದರ್ಶನಗೊಳ್ಳಲಿದೆ.