ದಾವಣಗೆರೆ, ಮಾ. 11- ನಗರದ ದಕ್ಷಿಣ ವಲಯದ ಎಸ್ಓಜಿ ಕಾಲೋನಿಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಾರದಾ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಪಾಲಿಕೆ 31ನೇ ವಾರ್ಡ್ನ ಪಾಮೇ ನಹಳ್ಳಿ ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮುಂಬರುವ ಪರೀಕ್ಷೆಗಳಲ್ಲಿ ಉತ್ತಮವಾಗಿ ಬರೆಯಲು ಶುಭ ಹಾರೈಸಿದರು.
ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಎಸ್.ಎಂ. ಬಡಾವಣೆ ಈ ಎರಡೂ ಶಾಲೆಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಅನುಕೂಲಕ್ಕಾಗಿ 310 ತಟ್ಟೆಗಳನ್ನು ವಿತರಿಸಿದ ನಗರ ಪಾಲಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಗಣೇಶ್ ಹುಲ್ಲುಮನೆ, ಶ್ರೀಮತಿ ಗೀತಾ ಮಾರುತಿ, ಎಸ್ಎಂ ಬಡಾವಣೆ ಸಹಿಪ್ರಾ ಶಾಲೆ ಎಸ್ಡಿಎಂಸಿ ಸದಸ್ಯ ಎಸ್. ನಾಗರಾಜ್ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಹದಡಿ ವೆಂಕಟೇಶಪ್ಪ, ಡಿ.ಜಿ. ಶಿವಕುಮಾರ್, ರೇವಣಸಿದ್ದಪ್ಪ, ಮುನಿಯಪ್ಪ ಮತ್ತು ಇತರರು ಉಪಸ್ಥಿತರಿದ್ದರು.