ಕೊಟ್ಟೂರು, ಮಾ. 4 – ಪಟ್ಟಣದ ಕೊಟ್ಟೂರೇಶ್ವರ ಕಾಲೇಜಿನ ಗಣಕ ಯಂತ್ರ ವಿಜ್ಙಾನ ವಿಭಾ ಗದ ಪ್ರಾಧ್ಯಾಪಕ ಡಾ. ಸ್ವಾಮಿ ಆರಾಧ್ಯ ಮಠ ಅವರಿಗೆ ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ ಪಿಹೆಚ್ಡಿ ಪದವಿ ಪ್ರದಾನ ಮಾಡಲಾಯಿತು. ಹೊಸಪೇಟೆಯ ಪ್ರೌಢದೇವ ರಾಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಯು.ಎಂ.ರೋಹಿತ ಇವರ ಮಾರ್ಗದರ್ಶನದಲ್ಲಿ ‘ಎಫಿಷಿಯೆಂಟ್ ಸಾಫ್ಟ್ ಕಂಪ್ಯೂಟಿಂಗ್ ಮೆಥಡ್ಸ್ ಫಾರ್ ಮಾಡಲಿಂಗ್ ಆಫ್ ಸ್ಮಾರ್ಟ್ ಸಿಟೀಸ್ ’ ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದ್ದರು.
ಡಾ.ಸ್ವಾಮಿ ಆರಾಧ್ಯ ಮಠಗೆ ಪಿಹೆಚ್ಡಿ
