ದಾವಣಗೆರೆ, ನ. 22 – ಮಾಗನೂರು ಬಸಪ್ಪ ಸಂಯುಕ್ತ ಶಾಲೆಯ ವಿದ್ಯಾರ್ಥಿ ಅಜಿತ್ ಕುಮಾರ್ ಪಿ.ಬಿ. ರಾಷ್ಟ್ರಮಟ್ಟದ ಹ್ಯಾಂಡ್ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದೇ ದಿನಾಂಕ 25 ರಿಂದ 29 ರವರೆಗೆ ಛತ್ತೀಸ್ಗಡ ರಾಜ್ಯದಲ್ಲಿ ನಡೆಯುವ 68ನೇ ರಾಷ್ಟ್ರಮಟ್ಟದ U-14 ವಯೋಮಿತಿಯ ಬಾಲಕರ ಹ್ಯಾಂಡ್ಬಾಲ್ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ. ಇವರನ್ನು ಶ್ರೀ ಶಿವಪ್ರಕಾಶ ಸ್ವಾಮೀಜಿ ಅಭಿನಂದಿಸಿದ್ದಾರೆ.
ರಾಷ್ಟ್ರಮಟ್ಟದ ಹ್ಯಾಂಡ್ಬಾಲ್ ತಂಡಕ್ಕೆ ಅಜಿತ್ ಕುಮಾರ್ ಆಯ್ಕೆ
