ಎಲ್.ಐ.ಸಿ. ಶಾಖೆ -1ರ ಏಜೆಂಟರ ಸಂಘದ ಸಭೆಯಲ್ಲಿ ಸಂಸದರಿಗೆ ಸನ್ಮಾನ

ಎಲ್.ಐ.ಸಿ. ಶಾಖೆ -1ರ ಏಜೆಂಟರ  ಸಂಘದ ಸಭೆಯಲ್ಲಿ ಸಂಸದರಿಗೆ ಸನ್ಮಾನ

ದಾವಣಗೆರೆ, ಅ. 27 – ಸ್ಥಳೀಯ ಎಲ್.ಐ.ಸಿ. ಏಜೆಂಟ್ಸ್ ಅಸೋಸಿಯೇಷನ್ ಶಾಖೆ-1ರ 18ನೇ ವಾರ್ಷಿಕ ಮಹಾಸಭೆಯು ಸಂಘದ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಎಸ್.ಜಿ. ಪಂಪಣ್ಣನವರ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆಯಿತು. 

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

2023-24ನೇ ಸಾಲಿನ ಶತಕ ವೀರ ಪ್ರತಿನಿಧಿಗಳಿಗೆ ಬಹುಮಾನ ವಿತರಣೆ, 25 ವರ್ಷ ಸೇವೆ ಸಲ್ಲಿಸಿದ ಪ್ರತಿನಿಧಿಗಳಿಗೆ ಸನ್ಮಾನ, ಪ್ರತಿನಿಧಿಗಳ ಪ್ರತಿಭಾನ್ವಿತ ಮಕ್ಕಳಿಗೆ ಬಹುಮಾನ ವಿತರಣೆಯನ್ನು ಭಾರತೀಯ ಜೀವ ವಿಮಾ ನಿಗಮದ 1ನೇ ಶಾಖಾ  ಹಿರಿಯ ಪ್ರಬಂಧಕ ಶಿವಪ್ಪ ನಾಯ್ಕ ಅವರು ಮಾಡಿದರು.

2024-25ನೇ ಕಾರ್ಯಕಾರಿ ಮಂಡಳಿಯನ್ನು ಸರ್ವಾನುಮತದಿಂದ ರಚಿಸಲಾಗಿದ್ದು, ಗೌರವಾಧ್ಯಕ್ಷರನ್ನಾಗಿ ಎಂ.ಎಸ್.ನಾಗರಾಜ್, ಅಧ್ಯಕ್ಷರನ್ನಾಗಿ ಎಸ್.ಜಿ.ಪಂಪಣ್ಣನವರನ್ನು ಉಪಾಧ್ಯಕ್ಷರನ್ನಾಗಿ ಎಸ್.ಬಿ. ಲೋಕೇಶ್, ಹೆಚ್.ಎಂ. ಚಂದ್ರಪ್ಪ, ಸಿ. ನಿಜಲಿಂಗಪ್ಪ, ಕಾರ್ಯದರ್ಶಿಯನ್ನಾಗಿ ಡಿ.ಸಿ. ಶಿವಮೂರ್ತಿ, ಖಜಾಂಚಿಯನ್ನಾಗಿ ಎಂ.ಎಂ. ಮಹಾದೇವಪ್ಪ, ಸಂಘಟನಾ ಕಾರ್ಯದರ್ಶಿ ಹೆಚ್. ಸಿದ್ದರಾಮೇಶ್ವರ್‍ರವರನ್ನು ಹಾಗೂ ನಿರ್ದೇಶಕರುಗಳನ್ನು ಆಯ್ಕೆ ಮಾಡಲಾಯಿತು.

error: Content is protected !!