ಡಿಕೆಎಸ್ ಬ್ರಿಗೇಡ್ ಕಚೇರಿ ಉದ್ಘಾಟನೆ

ಡಿಕೆಎಸ್ ಬ್ರಿಗೇಡ್ ಕಚೇರಿ ಉದ್ಘಾಟನೆ

ದಾವಣಗೆರೆ, ಅ.13- ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ, ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರೂ, ಮಾಜಿ ನಗರಸಭಾ ಅಧ್ಯಕ್ಷರೂ, ಕ್ರೀಡಾ ಪ್ರೋತ್ಸಾಹಕರೂ ಆದ ದಿನೇಶ್ ಕೆ. ಶೆಟ್ಟಿ ಅವರ ಅಭಿಮಾನಿ ಬಳಗದ ವತಿಯಿಂದ ನೂತನವಾಗಿ ಸ್ಥಾಪಿಸಿರುವ ದಿನೇಶ್ ಕೆ. ಶೆಟ್ಟಿ ಬ್ರಿಗೇಡ್ ಕಚೇರಿ ಇಂದು ಕಾರ್ಯಾರಂಭ ಮಾಡಿತು. 

 ಕಚೇರಿ ಉದ್ಘಾಟನೆಯನ್ನು ನೆರವೇರಿಸಿದ ದಿನೇಶ್ ಕೆ. ಶೆಟ್ಟಿ,  ಜನರ ಸೇವೆ ನಮ್ಮ ಗುರಿ. ಜನಸಾಮಾನ್ಯರ ಕೊರತೆಗಳನ್ನು ನಿವಾರಿಸಲು ಜನರಿಗೆ ಸದಾ ಕಾಲ ಸಿಗುವಂತಾಗಲಿ ಎಂದು ನವ ಯುವಕರು ನನ್ನ ಹೆಸರಲ್ಲಿ ಡಿಕೆಎಸ್ ಬ್ರಿಗೇಡ್ ಎಂದು ಹೊಸ ತಂಡವನ್ನು ಕಟ್ಟಿಕೊಂಡು ನನಗೆ ನನ್ನ ಸಮಾಜ ಸೇವೆಗೆ ಬೆಂಬಲವಾಗಿ ನಿಲ್ಲಲು ಕಚೇರಿ ಉದ್ಘಾಟನೆ ಮಾಡಲಾಗಿದೆ. ಇದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು 

ಎಸ್.ಎಲ್. ಆನಂದಪ್ಪ ಮಾತನಾಡಿ, ದಿನೇಶ್ ಕೆ. ಶೆಟ್ಟಿ ಅವರು 40 ವರ್ಷಗಳಿಂದ ಸಮಾಜ ಸೇವೆ ಸಲ್ಲಿಸುತ್ತಿದ್ದು, ಸದಾಕಾಲ ಜನ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ದಿನೇಶ್ ಕೆ. ಶೆಟ್ಟಿ  ಅವರ ಹೆಸರಿನಲ್ಲಿ ಬ್ರಿಗೇಡ್ ಸ್ಥಾಪಿಸಿ ಇನ್ನು ಹೆಚ್ಚಿನ ಸೇವೆ ಸಲ್ಲಿಸಲು ಮುಂದಾಗಿರುವುದು ಶ್ಲ್ಯಾಘನೀಯ ಎಂದರು.

ಶ್ರೀಮತಿ ಲತಿಕಾ ಕೆ ಶೆಟ್ಟಿ, ಬ್ರಿಗೇಡ್‌ ಅಧ್ಯಕ್ಷ ಬಕ್ಕೇಶ್ ಅಜ್ಜಂಪುರಶೆಟ್ರು, ವಿಜಯಕುಮಾರ್ ಜೈನ್, ವೆಂಕಟೇಶ್, ಪ್ರಸನ್ನಕುಮಾರ್, ಪ್ರತಾಪ್ ಕುಮಾರ್, ಯುವರಾಜ್, ಜಾಫರ್, ಸಾಧಿಕ್, ಶ್ರೀಕಾಂತ್ ಬಗರೆ, ರಾಜು ಭಂಡಾರಿ, ಕೇರಂ ಗಣೇಶ್, ಮಧು ಪವಾರ್, ಗೋಪಾಲ್, ಪರಶುರಾಮ್ ಮತ್ತಿತರರು ಭಾಗವಹಿಸಿದ್ದರು.

error: Content is protected !!