ಕುಂದೂರು ಪಂಚಾಯತಿ ಉಪಾಧ್ಯಕ್ಷರಾಗಿ ರಹಮತ್‌ ವುಲ್ಲಾ ಖಾನ್ ಆಯ್ಕೆ

ಕುಂದೂರು ಪಂಚಾಯತಿ ಉಪಾಧ್ಯಕ್ಷರಾಗಿ ರಹಮತ್‌ ವುಲ್ಲಾ ಖಾನ್ ಆಯ್ಕೆ

ಹೊನ್ನಾಳಿ, ಅ. 13 – ತಾಲ್ಲೂಕಿನ ಕುಂದೂರು ಪಂಚಾಯ್ತಿ ಉಪಾಧ್ಯಕ್ಷರಾಗಿ ರಹಮತ್‌ ವುಲ್ಲಾ ಖಾನ್ ಅವಿರೋಧ ಆಯ್ಕೆಯಾಗಿರುವುದಾಗಿ ಚುನಾವಣಾ ಧಿಕಾರಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ ತಿಳಿಸಿದರು.

ಈ ಹಿಂದೆ ಪಂಚಾಯತಿ ಉಪಾಧ್ಯಕ್ಷರಾಗಿದ್ದ ಚಿದಾನಂದ ಮೂರ್ತಿ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಪಂಚಾಯತಿ ಅಧ್ಯಕ್ಷರಾದ ರತ್ನಮ್ಮ, ಸದಸ್ಯರಾದ ರೇಖಾ, ಲತಾ, ಪ್ರಸನ್ನ ಕುಮಾರ್, ಆಂಜನೇಯ, ಉದಯಕುಮಾರ್, ಸುರೇಶ್, ರೇಣುಕಮ್ಮ, ಮಂಜುಳಾ, ಧನಂಜಯ, ಕಾರ್ಯದರ್ಶಿ ವೀರೇಂದ್ರ ಇನ್ನಿತರರಿದ್ದರು.

error: Content is protected !!