ಡಯಾಲಿಸಿಸ್‌ ರೋಗಿಗಳಿಗೆ ಉಚಿತ ವಾಹನ ಸೇವೆಗೆ ಚಾಲನೆ

ಡಯಾಲಿಸಿಸ್‌ ರೋಗಿಗಳಿಗೆ ಉಚಿತ ವಾಹನ ಸೇವೆಗೆ ಚಾಲನೆ

ದಾವಣಗೆರೆ, ಸೆ. 27- ಇಲ್ಲಿನ ಎಸ್.ಎಸ್‌.ನಾರಾಯಣ ಹೆಲ್ತ್‌ ಆಸ್ಪತ್ರೆ ವತಿಯಿಂದ ಡಯಾಲಿಸಿಸ್‌ ರೋಗಿಗಳಿಗೆ ಉಚಿತ ವಾಹನ ಸೇವೆಗೆ ಕಳೆದ ವಾರ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಅವರು, ಹೃದಯ ಸಂಬಂಧಿ ಸಮಸ್ಯೆಗಳಿಗೆ ಎಸ್‌. ಎಸ್‌. ನಾರಾಯಣ ಹೆಲ್ತ್‌ ಕೇರ್ ಆಸ್ಪತ್ರೆ ಉತ್ತಮ ಸೇವೆ ಒದಗಿಸುತ್ತಿದೆ ಎಂದು ಶ್ಯ್ಯಾಘಿಸಿದರು.

ಮೂತ್ರಪಿಂಡ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಡಯಾಲಿಸಿಸ್‌ ಚಿಕಿತ್ಸೆ ಅಗತ್ಯವಿದ್ದು, ಇಂತಹ ಸಂದರ್ಭಗಳಲ್ಲಿ ಉಚಿತ ವಾಹನ ಸೇವೆಯು ಅತ್ಯಂತ ಪ್ರಯೋಜನಕಾರಿಯಾಗಲಿದೆ. ಈ ಮೂಲಕ ಡಯಾಲಿಸಿಸ್‌ನ ಸಮಯಪಾಲನೆ ಜೊತೆಗೆ, ಓಡಾಟದ ವೆಚ್ಚವು ಉಳಿತಾಯವಾಗಲಿದೆ ಎಂದು ಹೇಳಿದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಸುನಿಲ್‌ ಭಂಡಾರಿಗಲ್ ಮಾತನಾಡಿ, ಎಸ್. ಎಸ್.‌ ಐ. ಎಮ್.‌ ಎಸ್ ಅಂಡ್ ಆರ್‌.ಸಿ ಜೊತೆ ಕೈ ಜೋಡಿಸಿರುವ ನಾರಾಯಣ ಹೆಲ್ತ್‌, ಕಳೆದ 11 ವರ್ಷಗಳಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಹೃದಯರೋಗಿಗಳಿಗೆ ಚಿಕಿತ್ಸೆ ಒದಗಿಸಿದ್ದು, ಕಳೆದ 8 ತಿಂಗಳುಗಳಿಂದ ನರರೋಗ, ಮೂತ್ರಪಿಂಡ, ಮೂತ್ರಕೋಶ ಮತ್ತು ಗ್ಯಾಸ್ಟ್ರೊಎಂಟರಾಲಜಿ ಸಂಬಂಧಿತ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುತ್ತಿದೆ. 

ಎಸ್.‌ಎಸ್.‌ಐ.ಎಂ.ಎಸ್‌ ಮತ್ತು ಆರ್‌ ಸಿ ವೈದ್ಯಕೀಯ ನಿರ್ದೇಶಕ ಡಾ. ಅರುಣ್‌ ಅಜ್ಜಪ್ಪ, ಮೂತ್ರಪಿಂಡ ಚಿಕಿತ್ಸಾ ತಜ್ಞ ಡಾ.ಪ್ರಮೋದ್‌.ಜಿ.ಆರ್ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!