ಚದುರಂಗದ ಆಟಕ್ಕೆ ವೇದಿಕೆಯಾದ ಸೇಂಟ್ ಜಾನ್ಸ್ ಅಂಗಣ

ಚದುರಂಗದ ಆಟಕ್ಕೆ ವೇದಿಕೆಯಾದ ಸೇಂಟ್ ಜಾನ್ಸ್ ಅಂಗಣ

ದಾವಣಗೆರೆ, ಜು. 28- ವಿಶ್ವ ಚದುರಂಗ ದಿನದ ಅಂಗವಾಗಿ ನಗರದ ಸೇಂಟ್ ಶಾಲಾ ಆವರಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚದುರಂಗ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿದ್ಯಾಸಂಸ್ಥೆಯ ಪ್ರಾಂಶುಪಾಲರುಗಳು ನಿಯಮಾನುಸಾರ ಚೆಸ್ ಆಟವನ್ನು ಆಡುವ ಮೂಲಕ ಚೆಸ್ ಸ್ಪರ್ಧೆ ಉದ್ಘಾಟಿಸಿದರು.  ಕ್ರೀಡೆಗಳು ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ಅವಶ್ಯಕವಾಗಿದ್ದು ಪ್ರತಿಯೊಬ್ಬರೂ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಒಳಾಂಗಣ ಅಥವಾ ಹೊರಾಂಗಣ ಆಟಗಳನ್ನಾಡುವ ಹವ್ಯಾಸವನ್ನು ರೂಢಿಸಿಕೊಳ್ಳಿ ಎಂದು ಸಂಸ್ಥೆಯ ಪ್ರಾಂಶುಪಾಲ ಸೈಯ್ಯದ್ ಆರಿಫ್ ಆರ್.  ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರೀತಾ. ಟಿ. ರೈ, ಉಪ ಪ್ರಾಂಶುಪಾಲರಾದ ಶ್ರೀಮತಿ ನೇತ್ರಾವತಿ ಎಸ್. ಎಂ.  ಹಾಗು ಇತರರು ಪಾಲ್ಗೊಂಡಿದ್ದರು.  

error: Content is protected !!