ಹರಿಹರ, ಜು.28- ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ನಗರದ ಶ್ರೀ ರಾಘವೇಂದ್ರ ಮಠದ ಹಿಂಭಾಗದಲ್ಲಿ ಮೈದುಂಬಿಕೊಂಡು ಹರಿಯುತ್ತಿರುವ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಬಿ.ಪಿ.ಹರೀಶ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಜಿ.ಶಿವಾನಂದಪ್ಪ, ಪ್ರಧಾನ ಕಾರ್ಯದರ್ಶಿ ವೀರಣ್ಣ ಡಿ.ಯಾದವಾಡ, ಉಪಾಧ್ಯಕ್ಷ ಜಿ.ಕೆ.ಮಲ್ಲಿಕಾರ್ಜುನ್, ಅಶ್ವಿನಿ ಕೃಷ್ಣ ಮತ್ತು ಎನ್.ಪಿ.ತಿಮ್ಮನಗೌಡ, ಕೋಶಾಧ್ಯಕ್ಷರಾದ ಅಂಜು ಸುರೇಶ್ ರಾಜೇನವರ್, ಕಾರ್ಯಾಧ್ಯಕ್ಷ ಬಸವರಾಜ್ ಓಂಕಾರಿ, ಜಂಟಿ ಕಾರ್ಯದರ್ಶಿಗಳಾದ ನಾಗರಾಜ್ ಕುರುವತ್ತಿ, ಗೀತಾ ನಾಗರಾಜ್ (ಬೆಳ್ಳೂಡಿ), ಸಂಘಟನಾ ಕಾರ್ಯದರ್ಶಿಗಳಾದ ರವಿ ಸಾರಥಿ, ಪ್ರವೀಣ್ ಕುಮಾರ್ ಜಿ.ವಿ, ಸದಸ್ಯರುಗಳಾದ ಅನಿತಾ ಹೆಚ್.ಪಾಟೀಲ್, ಜಿ.ಎಂ.ರೂಪ, ಗೀತಾ ಎಂ.ಎನ್, ಕೆ.ಸಿ.ಪಟೇಲ್, ಹೆಚ್.ಮಹದೇವಪ್ಪ, ಬಂಡೇರ್ ತಿಮ್ಮಣ್ಣ, ಕೆ.ಉಮಾಪತಿ, ಜಿ.ಎಸ್.ಬಸವನಗೌಡ ಇತರರು ಉಪಸ್ಥಿತರಿದ್ದರು.
ಹರಿಹರದಲ್ಲಿ ವೀರಶೈವ ಲಿಂಗಾಯತ ಮಹಾಸಭಾದಿಂದ ತುಂಗಭದ್ರಾ ನದಿಗೆ ಬಾಗಿನ
![03 hrr 29-07-2024 ಹರಿಹರದಲ್ಲಿ ವೀರಶೈವ ಲಿಂಗಾಯತ ಮಹಾಸಭಾದಿಂದ ತುಂಗಭದ್ರಾ ನದಿಗೆ ಬಾಗಿನ](https://janathavani.com/wp-content/uploads/2024/07/03-hrr-29-07-2024-860x384.jpg)