ದಾವಣಗೆರೆ, ಜು. 19- ಕೆ.ಎಸ್. ವೈನ್ ಲ್ಯಾಂಡ್ ಸ್ಥಳಾಂತರ ಮಾಡುವಂತೆ ಒತ್ತಾಯಿಸಿ ವಿನೋಬನಗರ ಮತ್ತು ಯಲ್ಲಮ್ಮನಗರದ ನಿವಾಸಿಗಳು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವಿನೋಬನಗರ 4 ನೇ ಮುಖ್ಯರಸ್ತೆಯಲ್ಲಿರುವ ಕೆ.ಎಸ್. ವೈನ್ ಲ್ಯಾಂಡ್ ನಿಂದ ಸ್ಥಳೀಯ ನಾಗರಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಸ್ಥಳಾಂತರ ಮಾಡುವಂತೆ ಸಂಬಂಧಿಸಿದ ಅಬಕಾರಿ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಿತ್ಯ ಮದ್ಯ ಸೇವನೆ ಮಾಡಿ ಜಗಳವಾಡು ವುದು, ಬಾರ್ ಬಳಿ ಮೂತ್ರ ವಿಸರ್ಜನೆ, ವಾಂತಿ ಮಾಡುವುದು, ಮಹಿಳೆಯರಿಗೆ ಅವಾಚ್ಯ ಶಬ್ಧ ಗಳಿಂದ ನಿಂದಿಸುವುದನ್ನು ಮಾಡುತ್ತಾರೆ. ಇದರಿಂದ ನಾಗರಿಕರಿಗೆ ಕಿರಿಕಿರಿ ಉಂಟಾಗುತ್ತದೆ ಎಂದರು.
ಬಾರ್ ಸ್ಥಳಾಂತರ ಮಾಡುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿವಾಸಿಗಳಾದ ಅನುಪಮ ರವಿಕುಮಾರ್, ವಿಜಯಲಕ್ಷ್ಮಿ ನಿರಂಜನ್, ನಿವೇದಿತಾ ಸಚ್ಚಿನ್, ಭಾಗೀರಥಿ ಪಾಂಡುರಂಗ, ಸರೋಜಾ, ವಿಜಯಾ, ನಾಗರಾಜ್, ಸೋಗಿ ವೀರೇಶ್ ಮತ್ತಿತರರು ಭಾಗವಹಿಸಿದ್ದರು.