ಜಯನಗರದ ಶ್ರೀ ಸಾಯಿ ಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ

ಜಯನಗರದ ಶ್ರೀ ಸಾಯಿ ಬಾಬಾ ಮಂದಿರದಲ್ಲಿ ಗುರುಪೂರ್ಣಿಮೆ

ದಾವಣಗೆರೆ ಜಯನಗ ರದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ದೇವಸ್ಥಾನದ ಸೇವಾ ಟ್ರಸ್ಟ್ ವತಿಯಿಂದ ಗುರು ಪೂರ್ಣಿ ಮೆ ಪ್ರಯುಕ್ತ  ಇಂದು – ನಾಳೆ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12ರವರೆಗೆ ಶ್ರೀ ಶಿರಡಿ ಸಾಯಿಬಾಬಾರವರ ಉತ್ಸವ ಮೂರ್ತಿಯ ಮೆರವಣಿಗೆಯನ್ನು ನಂದಿಕೋಲು, ಚಂಡಿ ಹಾಗೂ ನಾಸಿಕ್ ಡೋಲು ವಾದ್ಯಗಳ ಮೂಲಕ ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದವರೆಗೆ ಏರ್ಪಡಿಸಲಾಗಿದೆ. ಮಧ್ಯಾಹ್ನ 12.30 ರಿಂದ 1ರವರೆಗೆ ಮಹಾಮಂಗಳಾರತಿ ತದ ನಂತರ 3 ರವರೆಗೆ ಪ್ರಸಾದ ವಿನಿಯೋಗ ಇರುತ್ತದೆ.

ನಾಳೆ ಭಾನುವಾರ ಗುರು ಪೂರ್ಣಿಮೆಯ ಪ್ರಯುಕ್ತ ಮುಂಜಾನೆಯ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಸೂರ್ಯನಾರಾಯಣ ಸ್ವಾಮೀಜಿ ನೇತೃತ್ವದಲ್ಲಿ ಬೆಳಿಗ್ಗೆ 4.30 ರಿಂದ 9.30ರ ವರೆಗೆ ಗಣಹೋಮ ಹಾಗೂ ಗುರುಹೋಮ, ಶ್ರೀ ಸಾಯಿಬಾಬಾರವರ ಮೂರ್ತಿಗೆ ಹಾಲಿನ ಅಭಿಷೇಕ, ಬೆಳಿಗ್ಗೆ 9.30 ರಿಂದ 12ರವರೆಗೆ ಶ್ರೀ ಸಾಯಿ ಸತ್ಯನಾರಾಯಣ ಹಾಗೂ ನವಗ್ರಹ ಪೂಜೆ. ಮಧ್ಯಾಹ್ನ 12.30 ರಿಂದ 1 ರವರೆಗೆ ಶ್ರೀ ಸಾಯಿಬಾಬಾರವರ ಮಹಾ ಮಂಗಳಾರತಿ ಮಧ್ಯಾಹ್ನ 1.30 ರಿಂದ 4ರ ವರೆಗೆ ಮಹಾಪ್ರಸಾದ ವಿನಿಯೋಗ ಇರುತ್ತದೆ. ಸಂಜೆ 6.30 ರಿಂದ 7 ರವರೆಗೆ ಶ್ರೀ ಶಿರಡಿ ಸಾಯಿಬಾಬಾರವರ ಸಾಯಂಕಾಲದ ಆರತಿ, ರಾತ್ರಿ 9.30 ರಿಂದ 10 ರವರೆಗೆ ಶ್ರೀ ಸಾಯಿಬಾಬಾ ರವರ ಶೇಜಾರತಿ ಇರುತ್ತದೆ.

error: Content is protected !!