ದೇವನಾಯಕನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ದಿಡಗೂರಿನ ಎ.ಜಿ. ಪ್ರಕಾಶ್

ದೇವನಾಯಕನಹಳ್ಳಿ ಕೃಷಿ ಪತ್ತಿನ ಸಹಕಾರ  ಸಂಘದ ಅಧ್ಯಕ್ಷರಾಗಿ ದಿಡಗೂರಿನ ಎ.ಜಿ. ಪ್ರಕಾಶ್

ಹೊನ್ನಾಳಿ, ಜೂ. 21 – ಪಟ್ಟಣದ ದೇವನಾಯಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ  ದಿಡಗೂರಿನ ಎ.ಜಿ. ಪ್ರಕಾಶ್  ಆಯ್ಕೆಯಾದರು. 

ಹಿಂದಿನ ಅಧ್ಯಕ್ಷರಾಗಿದ್ದ ಎಚ್.ಪಿ. ಗುರುಬಸಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಎ.ಜಿ. ಪ್ರಕಾಶ್ ಅವರು ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ  ಉಮೇದುವಾರಿಕೆ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಎ.ಜಿ. ನವೀನ್ ಕುಮಾರ್ ಅವರು  ಆಯ್ಕೆಯನ್ನು ಘೋಷಿಸಿದರು. 

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಡಿ.ಎಂ. ವಿನೋದಮ್ಮ, ಸದಸ್ಯ ಡಿ.ಕೆ. ಚಂದ್ರಪ್ಪ, ಬಿ.ಎಚ್. ಗಣೇಶಪ್ಪ, ಬಿ.ಎಚ್. ಕುಮಾರ್, ಟಿ. ಮಲ್ಲಪ್ಪ, ಕೆ.ಎಚ್. ಪರಮೇಶ್, ಎಚ್.ಪಿ. ಗುರುಬಸಪ್ಪ, ಡಿ.ಬಿ. ಮಹೇಂದ್ರ, ಎಸ್.ಎಚ್. ಮಾರುತಿ, ಒ.ಕೆ. ರಮೇಶ್, ಸುಶೀಲಮ್ಮ, ಮುಖ್ಯ ಕಾರ್ಯ ನಿರ್ವಾಹಕ ಜಿ.ಎಂ. ಚೇತನ್, ಸಿಬ್ಬಂದಿಗಳಾದ  ಡಿ.ಎಸ್. ನವೀನ್, ಎಂ.ಎಸ್. ಮನೋಜ್ ಉಪಸ್ಥಿತರಿದ್ದರು. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಸಣ್ಣಕ್ಕಿ ಬಸವನಗೌಡ್ರು, ಹೊನ್ನಾಳಿ ತಾಲ್ಲೂಕು ಸಾಧುವೀರಶೈವ ಸಮಾಜದ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ನ್ಯಾಮತಿ ತಾಲ್ಲೂಕು ಅಧ್ಯಕ್ಷ ಕೋಡಿಕೊಪ್ಪ ಶಿವಣ್ಣ, ಡಿಸಿಸಿ ಬ್ಯಾಂಕ ನಿರ್ದೇಶಕ ಡಿ.ಎಸ್. ಸುರೇಂದ್ರಗೌಡ, ಡಿ.ಜಿ. ವಿಶ್ವನಾಥ್ ಸೇರಿದಂತೆ ಹಲವು ಮುಖಂಡರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

error: Content is protected !!