ಮಲೇಬೆನ್ನೂರಿನ ಪಿಎಸಿಎಸ್ ಅಧ್ಯಕ್ಷರಾಗಿ ಮಂಜುನಾಥ್ ಪಟೇಲ್

ಮಲೇಬೆನ್ನೂರಿನ ಪಿಎಸಿಎಸ್ ಅಧ್ಯಕ್ಷರಾಗಿ ಮಂಜುನಾಥ್ ಪಟೇಲ್

ಮಲೇಬೆನ್ನೂರು, ಜೂ.21- ಇಲ್ಲಿನ ಪ್ರಾಥ ಮಿಕ ಕೃಷಿ ಪತ್ತಿನ ಸಹಕಾರ ಸಂಘದ  ಅಧ್ಯಕ್ಷರಾಗಿ ಕೊಮಾರನಹಳ್ಳಿಯ ಜಿ.ಮಂಜುನಾಥ್ ಪಟೇಲ್ ಅವರು ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿ.ಸೈಫುಲ್ಲಾ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು.

ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುನೀತಾ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಂಘದ ಸಿಇಓ ಸಿದ್ದಪ್ಪ, ಸಿಬ್ಬಂದಿಗಳಾದ ಪ್ರಕಾಶ್, ಜಾಫರ್ ಸಹಕರಿಸಿದರು.

ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಚಂದ್ರಮ್ಮ, ನಿರ್ದೇಶಕರಾದ ಸಿರಿಗೆರೆ ರಾಜಣ್ಣ, ಕೆ.ಪಿ.ಗಂಗಾಧರ್, ಎಂ.ಬಿ.ಗುಲ್ಜಾರ್, ಪಿ.ಆರ್.ಕುಮಾರ್, ಯುನೂಸ್, ಶ್ರೀಮತಿ ನಾಗರತ್ನ ಕೆ.ಜಿ.ಪರಮೇಶ್ವರಪ್ಪ, ಶ್ರೀಮತಿ ರೇವಮ್ಮ ಐರಣಿ ಪುಟ್ಟಪ್ಪ, ಎ.ಕೆ.ನರಸಿಂಹಪ್ಪ, ಡಿಸಿಸಿ ಬ್ಯಾಂಕ್ ಮೇಲ್ವೆಚಾರಕ ಲೋಕೇಶ್ ನಾಯ್ಕ ಹಾಜರಿದ್ದು, ಮಂಜುನಾಥ್ ಪಟೇಲ್ ಅವರ ಅವಿರೋಧ ಆಯ್ಕೆಗೆ ಸಮ್ಮತಿ ಸೂಚಿಸಿದರು.

ಚುನಾವಣೆ ನಂತರ ನೂತನ ಅಧ್ಯಕ್ಷರನ್ನು ಮಾಜಿ ಶಾಸಕ ಎಸ್.ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಸೇರಿದಂತೆ,  ಇತರರು ಅಭಿನಂದಿಸಿದರು.

error: Content is protected !!