ಸಂಸದರಾದ ಪ್ರಿಯಾಂಕ ಜಾರಕಿಹೊಳಿ ಅವರಿಗೆ ಹುಲ್ಲುಮನೆ ಗಣೇಶ್ ಸನ್ಮಾನ

ಸಂಸದರಾದ ಪ್ರಿಯಾಂಕ ಜಾರಕಿಹೊಳಿ ಅವರಿಗೆ ಹುಲ್ಲುಮನೆ ಗಣೇಶ್ ಸನ್ಮಾನ

ದಾವಣಗೆರೆ, ಜೂ. 13 – ಪ್ರಥಮ ಸ್ಪರ್ಧೆಯಲ್ಲೇ ಸಂಸದರಾಗಿ ಆಯ್ಕೆಯಾಗಿರುವ ಸಚಿವ ಸತೀಶ್ ಜಾರಕಿಹೊಳಿಯವರ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಅವರು ರಾಜನಹಳ್ಳಿಯ ಮಹರ್ಷಿ ಶ್ರೀ ವಾಲ್ಮೀಕಿ ಗುರುಪೀಠಕ್ಕೆ ಇಂದು ಭೇಟಿ ನೀಡಿ ಜಗದ್ಗುರು ಶ್ರೀ ಪ್ರಸನ್ನಾನಂದ ಶ್ರೀಗಳ ಆಶೀರ್ವಾದ ಪಡೆದರು.

ಇದೇ ಸಂದರ್ಭದಲ್ಲಿ ಹುಲ್ಲುಮನಿ ಗಣೇಶ್ ಗೆಳೆಯರ ಬಳಗದ ವತಿಯಿಂದ ಸಂಸದರಾದ ಪ್ರಿಯಾಂಕ ಜಾರಕಿಹೊಳಿ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಸವಿತಾ ಹುಲ್ಲುಮನಿ ಗಣೇಶ್, ನಾಯಕ ಸಮುದಾಯದ ಯುವ ಮುಖಂಡರುಗಳಾದ ಪಿ.ಬಿ. ಅಂಜುಕುಮಾರ್, ಸಚಿನ್, ಎನ್.ಗುರುರಾಜ್, ನಿಟ್ಟೂರ್ ಅಜಯ್, ಬಾಲರಾಜು ಹಾಗೂ ಅಜಯ್ ಎಸ್.ವಿ.ಎಸ್. ನಗರ ಸೇರಿದಂತೆ ಇನ್ನು ಅನೇಕರು ಉಪಸ್ಥಿತರಿದ್ದು, ಅಭಿನಂದಿಸಿದರು. 

error: Content is protected !!