ಪರಿಷತ್ : ವ್ಯಕ್ತಿಗಳ ಸಾಧನೆಯ ಆಧಾರಿತ ಚುನಾವಣೆ

ಪರಿಷತ್ : ವ್ಯಕ್ತಿಗಳ ಸಾಧನೆಯ ಆಧಾರಿತ ಚುನಾವಣೆ

ಹೊನ್ನಾಳಿಯಲ್ಲಿ ಮಾಜಿ ಶಾಸಕ ಉಡುಪಿಯ ಕೆ. ರಘುಪತಿ ಭಟ್

ಹೊನ್ನಾಳಿ, ಮೇ 28 – ನೈಋತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ನನಗೆ ಸಾಧನೆಯ ಆಧಾರದ ಮೇಲೆ ಮತ ನೀಡಿ ಬೆಂಬಲಿಸುವಂತೆ ಮಾಜಿ ಶಾಸಕ ಉಡುಪಿಯ ಕೆ. ರಘುಪತಿ ಭಟ್ ಹೇಳಿದರು.

ಅವರು, ಹೊನ್ನಾಳಿ ವಾಲ್ಮೀಕಿ ಸಮುದಾಯ ಭವನದಲ್ಲಿ ಇಂದು ನಡೆದ ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದಾಗಿ ಹೇಳಿದರು.

ಉಡುಪಿಯಲ್ಲಿ ಮೂರು ಬಾರಿ ಶಾಸಕನಾಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಪಕ್ಷವನ್ನು ತಳ ಮಟ್ಟದಿಂದ ಕಟ್ಟಿ ಬೆಳೆಸಿದವನಾಗಿದ್ದು, ಕಳೆದ ಬಾರಿ ಕ್ಷೇತ್ರದ ಕಾರ್ಯಕರ್ತನಿಗೆ ಉಡುಪಿ ವಿಧಾನಸಭೆ ಟಿಕೆಟ್ ನೀಡಿದ್ದರಿಂದ ಅವರ ಗೆಲುವಿಗೆ ಶ್ರಮಿಸಿದ್ದನ್ನು ಸಭೆಯಲ್ಲಿ ಸ್ಮರಿಸಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷ ಬೇರೆಯವರಿಗೆ ಚುನಾವಣೆಯಲ್ಲಿ ಅವಕಾಶ ಕಲ್ಪಿಸಿದೆ. ಪಕ್ಷೇತರ ಅಭ್ಯರ್ಥಿಯಾದ ನನ್ನ ಕ್ರಮ ಸಂಖ್ಯೆ 7ಕ್ಕೆ ಮತ ನೀಡಿ ಬೆಂಬಸಲಿಸುವಂತೆ ಮನವಿ ನೀಡಿದರು.

ಸವಳಂಗ, ನ್ಯಾಮತಿ ಮೂಲಕ ಇಂದು ಪ್ರವಾಸ ಆರಂಭಿಸಿರುವ ತಾವು ಹೊನ್ನಾಳಿ ಚನ್ನಗಿರಿಯಲ್ಲೂ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ತಮ್ಮ ಕ್ಷೇತ್ರದಲ್ಲಿ ಸಾಧಕ ಶಿಕ್ಷಕ ಪ್ರಶಸ್ತಿ, ಸಾಧಕ ಶಾಲೆ ಪ್ರಶಸ್ತಿ ನೀಡಿ ಶಿಕ್ಷಣ ಪ್ರಗತಿಗೆ ಮುಂದಾಗಿದ್ದು, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿರುವ ನನ್ನನ್ನು ಬೆಂಬಲಿಸಬೇಕೆಂದರು. 

ಸಮಾರಂಭದಲ್ಲಿ ಹೊನ್ನಾಳಿ ನಾರಾಯಣ್, ಬಿಂಬ ಮಂಜುನಾಥ, ಮದನಭಾವಿ ಶಾಂತ ವೀರಪ್ಪ, ಲಾಯರ್‍ಮಂಜುನಾಥ, ಅಶ್ವಿನಿ, ವಾಸಪ್ಪ, ಗುರುದತ್, ಕತ್ತಿಗೆ ನಾಗರಾಜ್, ಯೊಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!