ಹರಿಹರ, ಫೆ.1- ಸೋಮವಾರ ನಡೆಯುವ ಕೊಟ್ಟೂರು ಶ್ರೀ ಗುರುಬಸವೇಶ್ವರ ಸ್ವಾಮಿ ಮಹಾ ರಥೋತ್ಸವದಲ್ಲಿ ಪಾಲ್ಗೊಳ್ಳಲು ನಗರದ ಹೊರವಲಯದ ಕೋಡಿಯಾಲ ಹೊಸಪೇಟೆ ಗ್ರಾಮದ ಭಕ್ತರು ಪಾದಯಾತ್ರೆ ಮೂಲಕ ಇಂದು ಸಂಜೆ ತೆರಳಿದರು.
ಈ ಸಂದರ್ಭದಲ್ಲಿ ಪೂಜಾರ್ ಮಂಜುನಾಥ್ ಸ್ವಾಮಿ, ಬಸವರಾಜ್ ಬಣಕಾರ್, ಪ್ರವೀಣ್ ಕರಡೆಪ್ಪನವರ್, ಸಂದೀಪ್ ಪೂಜಾರ್, ಗುರು, ರುದ್ರೇಶ್ ಬಾತಿ, ಹುಚ್ಚಪ್ಪ, ಗಿರೀಶ್ ಇತರರು ಹಾಜರಿದ್ದರು.