ಮಲೇಬೆನ್ನೂರು, ಮಾ.1- ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಪ್ರಚಾರ ಮಾಡುತ್ತಾ ಬೈಕ್ನಲ್ಲಿ ತಮಿಳುನಾಡಿನ ಮಧುರೆಯಿಂದ ದೆಹಲಿವರೆಗೆ ಜಾಗೃತಿ ಜಾಥಾ ಕೈಗೊಂಡಿರುವ ರಾಜಲಕ್ಷ್ಮಿ ಮತ್ತು ಅವರ ತಂಡ ಇಂದು ಸಂಜೆ ಹೊನ್ನಾಳಿಯಿಂದ ಮಲೇಬೆನ್ನೂರಿಗೆ ಆಗಮಿಸಿದಾಗ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿ, ನಂತರ ಹರಿಹರಕ್ಕೆ ಬೀಳ್ಕೊಟ್ಟರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಪಿ.ಆರ್.ರಾಜು, ಎ.ಕೆ. ಲೋಕೇಶ್, ಕಜ್ಜರಿ ಹರೀಶ್ ಬಟ್ಟೆ ಅಂಗಡಿ ವಿಶ್ವ, ಚಾಮುಂಡಿ, ಜಿಗಳಿ ಹನುಮಗೌಡ ಮತ್ತಿತರರು ಈ ವೇಳೆ ಹಾಜರಿದ್ದರು.