ಪಕ್ಷ ವಿರೋಧಿ ಹೇಳಿಕೆ ನೀಡುವವರಿಗೆ ಫೆ. 8ರ ಸಭೆಯಲ್ಲಿ ಉತ್ತರ : ಹರೀಶ್

ಪಕ್ಷ ವಿರೋಧಿ ಹೇಳಿಕೆ ನೀಡುವವರಿಗೆ ಫೆ. 8ರ ಸಭೆಯಲ್ಲಿ ಉತ್ತರ : ಹರೀಶ್

ಹೊನ್ನಾಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ

ಹೊನ್ನಾಳಿ, ಫೆ.5- ಸಂಸದ ಜಿ.ಎಂ. ಸಿದ್ದೇಶ್ವರ ಅವರು ಹೊರಗಿನವರು, ಲೋಕಸಭಾ ಟಿಕೆಟ್ ಕೊಡಬೇಡಿ ಎಂದು ಗೊಂದಲದ ಹೇಳಿಕೆ ನೀಡುವವವರಿಗೆ ಶಿಸ್ತಿನ ಎಚ್ಚರಿಕೆ ನೀಡುವ ಉದ್ದೇಶದಿಂದ ಇದೇ ಫೆ.8ರಂದು ದಾವಣಗೆರೆಯಲ್ಲಿ  ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ಸಭೆ ಕರೆಯಲಾಗುತ್ತಿದೆ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇನ್ನೆರಡು ತಿಂಗಳಲ್ಲೇ ಲೋಕಸಭಾ ಚುನಾವಣೆಗೆ ಸಜ್ಜಾಗ ಬೇಕಿದೆ. ಆದರೆ ಕೆಲವರ ಗೊಂದಲದ ಹೇಳಿಕೆ, ಮುಜು ಗರದ ಪ್ರಶ್ನೆಗಳಿಗೆ ಅಂದಿನ ಸಭೆಯಲ್ಲಿ ಉತ್ತರ ಕಂಡುಕೊ ಳ್ಳಬೇಕಿದೆ ಎಂದು ರೇಣುಕಾಚಾರ್ಯರ ಹೆಸರೇಳದೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.

ಬಾಯಲ್ಲಿ ಹೇಳುವುದು ಮೋದಿ ಹೆಸರು. ಬಿಜೆಪಿ ಗೆಲ್ಲಿಸುವೆ ಎಂದು  ಕಾಂಗ್ರೆಸ್ ಮನೆಗೆ ಹೋಗುತ್ತಾರೆ. ಅಲ್ಲಿಂದ ಬಂದು  ಸಿದ್ದೇಶ್ವರ ಹೊರ ಜಿಲ್ಲೆಯವರು ಎಂದು ಆರೋಪಿಸಿ,  ಟಿಕೆಟ್ ಕೇಳುವುದು ಸರಿಯೇ ಎಂದು ಹರೀಶ್ ಪ್ರಶ್ನಿಸಿದರು.

ಲೋಕಸಭಾ ಉಸ್ತುವಾರಿ ಹನಗವಾಡಿ ವೀರೇಶ್ ಮಾತನಾಡಿ, ರಾಜ್ಯದ 28 ಕ್ಷೇತ್ರಗಳಲ್ಲಿ 27 ಕ್ಷೇತ್ರಗಳಲ್ಲಿ ಇಲ್ಲದ ಗೊಂದಲ ದಾವಣಗೆರೆ ಕ್ಷೇತ್ರದಲ್ಲಿ ಮಾತ್ರವಿದೆ. ರಾಷ್ಟ್ರೀಯ ಸಮಿತಿಯು ಕೂಡ ಇವರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರೇ ದೂರವಾಣಿ ಮೂಲಕ ಇವರಿಗೆ ಎಚ್ಚರಿಕೆ ನೀಡಿದ್ದಾಗಿದೆ ಎಂದರು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ತಾಲೂಕು ಬಿಜೆಪಿ ಉಸ್ತುವಾರಿ ಶಾಂತ ರಾಜ್ ಪಾಟೀಲ್, ಬಿಜೆಪಿ ತಾಲ್ಲೂಕು ಮಾಜಿ ಅಧ್ಯಕ್ಷ ಎ.ಬಿ.ಹನುಮಂತಪ್ಪ  ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅವಳಿ ತಾಲ್ಲೂಕಿನಿಂದ ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕರ್ತರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸ ಕರಿಯಪ್ಪ, ತಾಲ್ಲೂಕು ಬಿಜೆಪಿ ಮುಖಂಡರುಗಳಾದ ಎ.ಜಿ.ಮಹೇಂದ್ರಗೌಡ, ಕೆ.ವಿ.ಚನ್ನಪ್ಪ, ಸಿ.ಕೆ.ರವಿ, ನೆಲಹೊನ್ನೆ ದೇವರಾಜ್, ಎಂ.ಯು.ನಟರಾಜ್, ಸಾಸ್ವೆಹಳ್ಳಿ ನರಸಿಂಹ ಮತ್ತಿತರರು ಉಪಸ್ಥಿತರಿದ್ದರು.

error: Content is protected !!