ದುಬೈ ಕನ್ನಡಿಗರ ಮನ ಗೆದ್ದ ಚಿರಂತನ ಕಲಾವಿದೆಯರು

ದುಬೈ ಕನ್ನಡಿಗರ ಮನ ಗೆದ್ದ ಚಿರಂತನ ಕಲಾವಿದೆಯರು

ದಾವಣಗೆರೆ, ನ.30- ದುಬೈ ಕರ್ನಾಟಕ ಸಂಘವು ಕರ್ನಾಟಕ  ರಾಜ್ಯೋತ್ಸವವನ್ನು  ಅಲ್ ನಸರ್ ಲೀಸರ್ ಲ್ಯಾಂಡ್, ಐಸ್ ರಿಂಕ್‌ನಲ್ಲಿ ವಿಜೃಂಭಣೆಯಿಂದ ಆಚರಿ ಸಿತು. ಅಲ್ಲಿ, ದಾವಣಗೆರೆಯ ಚಿರಂತನ ಸಾಂಸ್ಕೃತಿಕ ತಂಡವು ವಿಶೇಷ ನೃತ್ಯ ಪ್ರದ ರ್ಶನಗಳನ್ನು ನೀಡಿ, ದುಬೈ ಕನ್ನಡಿಗರ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು. 

ನಾಡ ದೇವತೆ ಚಾಮುಂಡೇಶ್ವರಿಯ ನೃತ್ಯ ರೂಪಕ ವನ್ನು ಚಿರಂತನದ ಕಲಾವಿದೆಯರು  ಆಕರ್ಷಕವಾಗಿ ಪ್ರದರ್ಶಿಸಿ, ಪ್ರೇಕ್ಷಕರ ಜೊತೆಗೆ ಅತಿಥಿಯಾಗಿ ಆಗಮಿಸಿದ್ದ ಸಂಸದರೂ ಆಗಿರುವ ನಟಿ ಶ್ರೀಮತಿ ಸುಮಲತಾ ಅಂಬರೀಶ್ ತಮ್ಮ ಭಾಷಣದಲ್ಲಿ ಚಿರಂತನ ತಂಡದ ವಿದ್ಯಾರ್ಥಿನಿಯರನ್ನು ಕುರಿತು ಪ್ರಶಂಸೆ ನೀಡಿದ್ದು ವಿಶೇಷವಾಗಿತ್ತು. 

ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಕೂಡ ಚಿರಂತನದ ನೃತ್ಯ ಪ್ರದರ್ಶನಕ್ಕೆ ತಮ್ಮ ಭಾಷಣದಲ್ಲಿ ಮೆಚ್ಚುಗೆ ಸೂಚಿಸಿದರು. ವಿಭಿನ್ನ ಜಾನಪದ ನೃತ್ಯಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ  ತಂಡ ಯಶಸ್ವಿಯಾಯಿತು.

error: Content is protected !!