ಹರಪನಹಳ್ಳಿ, ನ. 29 – ತಾಲ್ಲೂಕಿನ ತೌಡೂರು ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ, ಉಪಾಧ್ಯಕ್ಷ
ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಅಧ್ಯಕ್ಷರಾಗಿ ಎಂ. ವಿಜಯ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಕೆ. ಎಂ. ಮಂಜುನಾಥಯ್ಯ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಬಸವರಾಜ್ ಕೆ. ಎನ್. ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ವೈ.ಡಿ. ಅಣ್ಣಪ್ಪ, ಮುಖಂಡರುಗಳಾದ ಯರಬಳ್ಳಿ ಉಮಾಪತಿ, ಡಿ. ಸಿದ್ದಪ್ಪ, ಬಾಲೆನಹಳ್ಳಿ ಕೆಂಚನಗೌಡ, ರಾಮನಗೌಡ, ಕಾವಲಹಳ್ಳಿ ರವೀಂದ್ರನಾಥ್, ಜನಾರ್ಧನ್, ತೌಡೂರು ಕೆಂಚಪ್ಪ, ನಿವೃತ್ತ ಶಿಕ್ಷಕ ಚನ್ನಬಸಪ್ಪ, ಜಾತಪ್ಪ, ಹನುಮಂತಪ್ಪ, ಮನೋಹರ್, ರಾಜಾನಾಯ್ಕ್, ಪುಟ್ಟಪ್ಪ, ನಿರ್ದೇಶಕರುಗಳಾದ ಶಿವಯೋಗಿ, ಕೊಟ್ರಗೌಡ, ಕೆ. ಭರಮಪ್ಪ, ಪರುಸಪ್ಪ, ಗಣೇಶ್, ಶೇಖರ್ ನಾಯ್ಕ್, ದೊಡ್ಡ ಸಿದ್ದಪ್ಪ, ಮಲ್ಲಮ್ಮ, ಪುತ್ರಮ್ಮ, ಕಾಮಪ್ಪ, ಪ್ರಭಾರಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ. ಉಮೇಶ್, ಗುಮಾಸ್ತ ಹೆಚ್. ಮಲ್ಲೇಶ್, ಹಾಗೂ ಇತರರು ಉಪಸ್ಥಿತರಿದ್ದರು.