ಉಜ್ಜಯಿನಿ ಪೀಠದ ಜಗದ್ಗುರುಗಳಿಗೆ ಸ್ವಾಗತ

ಉಜ್ಜಯಿನಿ ಪೀಠದ ಜಗದ್ಗುರುಗಳಿಗೆ ಸ್ವಾಗತ

ರಾಣೇಬೆನ್ನೂರು, ನ.17- ನಗರದ ಮೆಡ್ಲೇರಿ ರಸ್ತೆಯ ವಿಜಯನಗರ ಬಡಾವ ಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಶಿವಾನಂದ ತಪೋಮಂದಿರ ಲೋಕಾರ್ಪಣೆ ಸಮಾರಂಭದ ನಿಮಿತ್ಯ ಬುಧವಾರ ನಗರಕ್ಕೆ ಆಗಮಿಸಿದ್ದ ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ರನ್ನು ಮೆರವಣಿಗೆ ಮೂಲಕ ಸ್ವಾಗತ ಕೋರಲಾಯಿತು.

ದೊಡ್ಡಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯರನ್ನು ಸಾರೋಟಿನಲ್ಲಿ ಕುಳ್ಳರಿಸಿ ಮೆರವಣಿಗೆ ಮೂಲಕ ಸುಭಾಸ್‌ ಚೌಕ, ಪೋಸ್ಟ್ ಸರ್ಕಲ್‌, ಮೆಡ್ಲೇರಿ ರಸ್ತೆ ಮಾರ್ಗವಾಗಿ ಶ್ರೀ ಶಿವಾನಂದ ತಪೋಮಂದಿರದವರೆಗೆ ಕರೆತರಲಾಯಿತು. ಜೋಡೆತ್ತಿನ ಮೆರವಣಿಗೆ, ಪೂರ್ಣ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಯುದ್ದಕ್ಕೂ ಸಾಗಿ ಬಂದರು. ಸಮಾಳ, ಜಾಂಜ್‌ ಮೇಳ, ಡೊಳ್ಳು ಕುಣಿತ ಮೆರವಣಿಗೆಗೆ ಮೆರಗು ನೀಡಿದವು.

error: Content is protected !!