ಉಜ್ಜಯಿನಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶಿವಾನಂದ ತಪೋವನ ಲೋಕಾರ್ಪಣೆ

ಉಜ್ಜಯಿನಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶಿವಾನಂದ ತಪೋವನ ಲೋಕಾರ್ಪಣೆ

ರಾಣೇಬೆನ್ನೂರು, ನ.13- ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ಶಿವಾಚಾರ್ಯರ  ಸಾನ್ನಿಧ್ಯದಲ್ಲಿ ಶ್ರೀ ಶಿವಾನಂದ ಸ್ವಾಮಿಗಳ ಅನುಗ್ರಹದಿಂದ ಶ್ರೀ ಮರುಳಸಿದ್ದೇಶ್ವರ, ಶ್ರೀ ನಾಗದೇವತೆ, ಶ್ರೀ ನವದುರ್ಗೆಯರ, ಶ್ರೀ ವೀರಭದ್ರೇಶ್ವರ, ಶ್ರೀ ವಿನಾಯಕ ಮತ್ತು ನವಗ್ರಹ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ ಹಾಗೂ ಶಿವಾನಂದ ತಪೋವನದ ಉದ್ಘಾಟನಾ ಸಮಾರಂಭ ನಡೆಯಲಿದೆ.

ನಾಡಿದ್ದು ದಿನಾಂಕ 15 ರಂದು ನಗರದ ದೊಡ್ಡಪೇಟೆ ಬಸವೇಶ್ವರ ದೇವಸ್ಥಾನದಿಂದ ಹೊರಟು ಮೆಡ್ಲೇರಿ ರಸ್ತೆಯ ವಿಜಯನಗರದ ಶ್ರೀ ಮಠಕ್ಕೆ ಬರುವ ಶ್ರೀ ಉಜ್ಜಯಿನಿ ಜಗದ್ಗುರುಗಳ ಹಾಗೂ ಎಲ್ಲಾ ಮೂರ್ತಿಗಳ ಮೆರವಣಿಗೆಯಲ್ಲಿ ಕದಮನಹಳ್ಳಿ ಭಕ್ತರ ಎತ್ತುಗಳು ಭಾಗವಹಿಸಲಿವೆ. ದಿನಾಂಕ 16 ರಂದು ಪ್ರಾಣ ಪ್ರತಿಷ್ಠಾಪನೆ ಹಾಗೂ ಧರ್ಮಸಭೆ ನಡೆಯಲಿದೆ.

ದಿಂಡದಹಳ್ಳಿ ಪಶುಪತಿ ಶ್ರೀಗಳು, ಹೊನ್ನಾಳಿ ಒಡೆಯರ ಚನ್ನಮಲ್ಲಿಕಾರ್ಜುನ ಶ್ರೀಗಳು, ಸಾಲೂರು ಗುರುಲಿಂಗ ಶ್ರೀಗಳು, ಆವರಗೊಳ್ಳ ಓಂಕಾರೇಶ್ವರ ಶ್ರೀಗಳು, ಗುಡ್ಡದಾನ್ವೇರಿ ಶಿವಯೋಗಿ ಶ್ರೀಗಳು, ರಾಣೇಬೆನ್ನೂರು ಗುರುಬಸವ ಶ್ರೀಗಳು, ಶನೇಶ್ಚರ ಮಠದ ಶಿವಯೋಗಿ ಶ್ರೀಗಳು, ರಟ್ಟಿಹಳ್ಳಿ ಶಿವಲಿಂಗ ಶ್ರೀಗಳು, ಲಿಂಗನಾಯ್ಕನಹಳ್ಳಿ ಚನ್ನವೀರ ಶ್ರೀಗಳು, ಲಿಂಗದಹಳ್ಳಿ ವೀರಭದ್ರ ಶ್ರೀಗಳು, ಹಿರೇಕುರವತ್ತಿ ಸಿದ್ದನಂದೀಶ್ವರ ಶ್ರೀಗಳು, ನಾಗವಂದ ಶಿವಯೋಗಿ ಶ್ರೀಗಳು ಪಾಲ್ಗೊಳ್ಳುವರು.

ಶಾಸಕ ಪ್ರಕಾಶ ಕೋಳಿವಾಡ ಅಧ್ಯಕ್ಷತೆ ವಹಿಸುವರು, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ.ಬಣಕಾರ, ಕೃಷ್ಣಾನಾಯಕ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಕೆ.ಎಸ್.ಈಶ್ವರಪ್ಪ,  ನಗರಸಭೆ ಸದಸ್ಯರು ಮತ್ತಿತರರು ಭಾಗವಹಿಸುವರು.

error: Content is protected !!