ವಿಷ್ಣು ಅಮೋಘ ನಟನೆಯಿಂದ ಸಮಾಜಕ್ಕೆ ಸಂದೇಶ

ವಿಷ್ಣು ಅಮೋಘ ನಟನೆಯಿಂದ ಸಮಾಜಕ್ಕೆ ಸಂದೇಶ

ದಾವಣಗೆರೆ, ಅ.1- ಮೇರು ನಟ ದಿ|| ಡಾ. ವಿಷ್ಣುವರ್ಧನ್ ತಮ್ಮ ಅಮೋಘ ನಟನೆಯ ಮೂಲಕ  ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವುದರ ಮೂಲಕ ಜನಪ್ರಿಯತೆ ಗಳಿಸಿದ್ದರು ಎಂದು ಅಖಿಲ ಕರ್ನಾಟಕ ಡಾ. ವಿಷ್ಣುವರ್ಧನ್ ಸಂಘದ ಜಿಲ್ಲಾಧ್ಯಕ್ಷ ವಿ. ತಿರುಮಲೇಶ್ (ಸ್ವಾಮಿ) ಅಭಿಪ್ರಾಯಪಟ್ಟರು.

ಇಲ್ಲಿನ ಭಗತ್ ಸಿಂಗ್ ನಗರದ ಆಟೋ ನಿಲ್ದಾಣದಲ್ಲಿ ವಿಷ್ಣುವರ್ಧನ್ ಅವರ 73ನೇ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಅಖಿಲ ಕರ್ನಾಟಕ ವಿಷ್ಣುವರ್ಧನ್ ಅಭಿಮಾನಿಗಳ ಜಿಲ್ಲಾ ಸಮಿತಿಯಿಂದ ಡಾ. ವಿಷ್ಣುವರ್ಧನ್ ಸಹಕಾರಿ ಬ್ಯಾಂಕ್ ತೆರೆಯಲು ಜಿಲ್ಲಾ ಸಮಿತಿ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ.  

ಈ ಸಹಕಾರಿ ಬ್ಯಾಂಕಿನಿಂದ ಬಡವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಅವರನ್ನು ಮೇಲೆತ್ತುವ ಕೆಲಸ ಮಾಡುವ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು. 

ಮರಣೋತ್ತರವಾಗಿ ವಿಷ್ಣು ಅವರಿಗೆ ಕರ್ನಾಟಕ ರತ್ನ  ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಗರಸಭೆ ಮಾಜಿ ಸದಸ್ಯ ಜೆ.ಎನ್. ನಿಂಗಪ್ಪ ಮಾತನಾಡಿ, ವಿಷ್ಣುವರ್ಧನ್ ಅವರು ರಾಜ್ಯ ಹಾಗೂ ದೇಶ ಕಂಡ ಅಪ್ರತಿಮ ಪ್ರತಿಭೆಯೆಂದು ಹೇಳಿದ ಅವರು, ಅವರ ಸಮಾಜಮುಖಿ ಕಾರ್ಯಗಳನ್ನು ಅಭಿಮಾನಿಗಳು ಈಡೇರಿಸಬೇಕೆಂದು ಹೇಳಿದರು.  

ಈ ಸಂದರ್ಭದಲ್ಲಿ ಪತ್ರಕರ್ತ  ಎಸ್. ಹನುಮಂತಪ್ಪ ಹಾಲಿವಾಣ, ಜಿಲ್ಲಾ ಪತ್ರ ಬರಹಗಾರ ಬಿ.ವಿ. ರಾಜಶೇಖರ್, ವಿಷ್ಣುವರ್ಧನ್ ಸಂಘದ ಕಾರ್ಯದರ್ಶಿ ವಿಜಯಕುಮಾರ್ ಚಾರ್ಮನಿ, ವಿನಾಯಕ ಪಗಡೆ, ಆಟೋ ಮಂಜಣ್ಣ, ಗಿರೀಶ್, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರು, ಲೋಕೇಶ್ ಸ್ವಾಮಿ ಹಾಗೂ ಆಟೋ ಚಾಲಕರು ಮತ್ತು ಮಾಲೀಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಆಟೋ ಚಾಲಕರಿಗೆ ಸಮವಸ್ತ್ರ ಹಾಗೂ ಟೀ ಶರ್ಟ್‍ಗಳನ್ನು ನೀಡ ಲಾಯಿತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

error: Content is protected !!