ರಾಜ್ಯಮಟ್ಟದ ಪ್ರತಿಭೆಗಳನ್ನು ಸ್ವರ ಸಂಗಮ ಒದಗಿಸಲಿ

ರಾಜ್ಯಮಟ್ಟದ ಪ್ರತಿಭೆಗಳನ್ನು ಸ್ವರ ಸಂಗಮ ಒದಗಿಸಲಿ

ಕೊಟ್ಟೂರಿನ ಸ್ವರ ಸಂಗಮ ಹಿಂದೂಸ್ಥಾನಿ ಸಂಗೀತ ವಾರ್ಷಿಕೋತ್ಸವದಲ್ಲಿ ಶಾಸಕ ನೇಮಿರಾಜ್‌

ಕೊಟ್ಟೂರು, ಸೆ. 13 – ನಗರದ ಕ್ಷೇತ್ರದಲ್ಲಿ ಸಂಗೀತ ಆಸಕ್ತಿ ಇರುವ ಪ್ರತಿಭೆಗಳುಳ್ಳ ಗುರುತಿಸಿ ಅವರನ್ನು ಸ.ರಿ.ಗ.ಮ.ಪಾ. ಕನ್ನಡ ಕೋಗಿಲೆ, ಅಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡುವ ಹಾಗೇ ಇಂತಹ ಸಂಗೀತಾ ಪಾಠಶಾಲೆಗಳು ಬೆಳಕಿಗೆ ಬರಬೇಕು ಎಂದು ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್ ನಾಯ್ಕ್ ರವರು ಹೇಳಿದರು. 

ಕೊಟ್ಟೂರು ಪಟ್ಟಣದ ಬಾಲಾಜಿ ಕನ್ವೆಷನ್‌ಹಾಲ್‌ನಲ್ಲಿ ನಡೆದ ಸ್ವರ ಸಂಗಮ ಟ್ರಸ್ಟ್ ಹಾಗೂ ಸ್ವರ ಸಂಗಮ ಹಿಂದೂಸ್ಥಾನಿ ಸಂಗೀತ  ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಮ್ಮ ತಾಲ್ಲೂಕಿನಲ್ಲಿ ಅದ್ಭುತ ಪ್ರತಿಭೆಗಳಿದ್ದರೂ  ಸರಿಯಾದ ವೇದಿಕೆ ಸಿಗದೇ ಬೆಳಕಿಗೆ ಬರುತ್ತಿಲ್ಲ. ತಾಲ್ಲೂಕಿನಲ್ಲಿ ಈ ತರಹದ ಸಂಗೀತ ಪಾಠಶಾಲೆ ಅತ್ಯವಶ್ಯಕವಾಗಿವೆ
ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುವ ಹಾಗೆ ಉತ್ತಮ ಪ್ರತಿಭೆಗಳನ್ನು ಈ ಸ್ವರ ಸಂಗಮ ಟ್ರಸ್ಟ್ ಒದಗಿಸಲಿ ಎಂದು ಎಂ.ಎಂ.ಜೆ. ಹರ್ಷವರ್ಧನ್ ರವರು ಹೇಳಿದರು.

ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಈ ಸ್ವರ ಸಂಗೀತ ಟ್ರಸ್ಟ್ ಸಂಸ್ಥಾಪಕರು  ಉತ್ತಮ ಪ್ರತಿಭೆಗಳನ್ನು ಗುರುತಿಸಿ ಸಂಗೀತ ಕ್ಷೇತ್ರದಲ್ಲಿ  ಒಂದು ಹೊಸ  ಅಲೆ ನಿರ್ಮಾಣ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಇಂತಹ ಕಲಾ ಟ್ರಸ್ಟ್‌ಗಳಿಗೆ ನಾವುಗಳು ಸದಾ ಪ್ರೋತ್ಸಾಹ ನೀಡುತ್ತೇವೆ ಎಂದು ಡಿ.ಎಸ್.ಎಸ್.  ಜಿಲ್ಲಾಧ್ಯಕ್ಷ  ಬಿ. ಮರಿಸ್ವಾಮಿ ಮಾತನಾಡಿದರು.

ಈ ಸಂದರ್ಭದಲ್ಲಿ ಟ್ರಸ್ಟ್  ಸಂಸ್ಥಾಪಕರಾದ ಶ್ವೇತಾ ಬಸವರಾಜ್, ಶೀಲಾ ಮಹದೇವ್ ಭರತನಾಟ್ಯ ಶಿಕ್ಷಕರು, ಶಾಂತ್ ಕುಮಾರಿ ಪಿಡಿಓ, ವೀರೇಶ್ ಗೌಡ ,  ಸಂಗೀತ ಶಾಲಾ ಮಕ್ಕಳಿಂದ ನೃತ್ಯ, ಗಾಯನ, ನೇರವರಿಸಿದರು,  ಲತಾ ಬಳ್ಳಾರಿ, ಸ್ವಾಗತಿಸಿ ವಂದಿಸಿದರು, ಇನ್ನು ಮುಂತಾದವರು ಉಪಸ್ಥಿತರಿದ್ದರು.

error: Content is protected !!