ಹರಪನಹಳ್ಳಿಯಲ್ಲಿ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಗೆ ಸನ್ಮಾನ

ಹರಪನಹಳ್ಳಿ, ಡಿ. 15- ಪಟ್ಟಣದ ನ್ಯಾಯಾ ಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಂಯುಕ್ತಾಶ್ರಯ ದಲ್ಲಿ ಹಮ್ಮಿಕೊಂಡಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷೆ, ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿಯವರನ್ನು ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದಿಂದ ಸನ್ಮಾನಿಸಲಾಯಿತು.

ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಭಾರತಿ ಸಿವಿಲ್, ಕಿರಿಯ ನ್ಯಾಯಾಧೀಶರಾದ ಪಕ್ಕೀರವ್ವ ಕೆಳಗೇರಿ, ಸಹಾಯಕ ಸರ್ಕಾರಿ ಅಭಿಯೋಜಕರಾದ  ಎನ್ .ಮೀನಾಕ್ಷಿ, ಡಿ. ನಿರ್ಮಲ, ಅಪರ ಸರ್ಕಾರಿ ವಕೀಲ ವಿ.ಜಿ. ಪ್ರಕಾಶ್ ಗೌಡ, ವಕೀಲರ ಸಂಘದ ಅಧ್ಯಕ್ಷ ಕೆ. ಚೆಂದ್ರೇಗೌಡ, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ಕಾರ್ಯದರ್ಶಿ ಗಿರಜ್ಜಿ ನಾಗರಾಜ್, ವಕೀಲರುಗಳಾದ ಕೋಡಿಹಳ್ಳಿ ಪ್ರಕಾಶ್, ಕೆ. ಲಿಂಗಾನಂದ, ಕೆ. ದ್ರಾಕ್ಷಾಯಿಣಿ, ಡಿ. ಹನು ಮಂತಪ್ಪ, ಉಚ್ಚಂಗಿದುರ್ಗದ ನಾಗೇಂದ್ರಪ್ಪ, ಮುಖಂಡ ಅಲಮರಸಿಕೇರಿ ಟಿ.ಬಿ. ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!