ಚಿತ್ರದುರ್ಗ : ಜಾನುವಾರು ಜಾತ್ರೆ

ಚಿತ್ರದುರ್ಗ, ಮಾ. 24- ನಗರಕ್ಕೆ ಸಮೀಪದ ಶಿಬಾರ ಗ್ರಾಮದಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಹಾಗು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಚಿತ್ರದುರ್ಗ ಇವರ ಸಹಯೋಗದಲ್ಲಿ ಜರುಗಿದ ಜಾನುವಾರು ಜಾತ್ರೆ ಕಾರ್ಯಕ್ರಮದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಭಾಗವಹಿಸಿದ್ದರು.

ಜಿ.ಪಂ. ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸುರೇಶ್‍ಬಾಬು, ಗ್ರಾ.ಪಂ. ಸದಸ್ಯ ರಾಮಾಂಜನೇಯ, ಎಂ.ಕೆ.ಹಟ್ಟಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಬಿ. ಗೀತಾ, ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಕೌಸಲ್ಯ ತಿಪ್ಪೇಸ್ವಾಮಿ,  ತಾ.ಪಂ. ಸದಸ್ಯೆ ಶ್ರೀಮತಿ ರಾಧಮ್ಮ ಜಗದೀಶ್, ಪ್ರಕಾಶ್, ಡಾ. ಕೃಷ್ಣಪ್ಪ ಮತ್ತು ಡಾ. ಬಿ. ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

error: Content is protected !!