ಎಸ್.ಎಸ್.ಎಂ. ನಗರದಲ್ಲೊಂದು ಸ್ಮಾರ್ಟ್ ಸ್ಟೇಡಿಯಂ

ದಾವಣಗೆರೆ: ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ ಎನ್ನುವುದು ಎಷ್ಟು ಸತ್ಯವೋ, ಕ್ರೀಡಾಪಟುಗಳ ಸಾಧನೆಗೆ ಕ್ರೀಡಾಂಗಣಗಳು ಅತಿ ಅಗತ್ಯ ಎನ್ನುವುದೂ ಸಹ ಅಷ್ಟೇ  ಸತ್ಯ.

ಬಹುತೇಕ ನಗರಗಳಲ್ಲಿ ಕ್ರೀಡಾಂಗಣ ಗಳಿ ರುವಂತೆ ದಾವಣಗೆರೆಯಲ್ಲೂ ಜಿಲ್ಲಾ ಕ್ರೀಡಾಂಗ ಣವಿದೆ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಅನೇಕ ಕ್ರೀಡಾಪಟುಗಳು ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಭ್ಯಾಸ ಮಾಡಿದವರು.

ನಗರ ಶರವೇಗದಲ್ಲಿ ಬೆಳೆಯುತ್ತಲೇ ಇದೆ. ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಕ್ರೀಡಾ ಸಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ದೇವನಗರಿಗೆ ಮತ್ತೊಂದು ಕ್ರೀಡಾಂಗಣ ಇದ್ದರೆ ಚೆನ್ನ ಎನ್ನು ವುದು ಹಲವಾರು ಕ್ರೀಡಾಪಟುಗಳ ಆಶಯವಾಗಿತ್ತು.

ಇದೀಗ ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರದ ಹಳೆ ಭಾಗದಲ್ಲಿರುವ ಎಸ್.ಎಸ್.ಎಂ. ನಗರದಲ್ಲಿ ನೂತನ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ .  6 ಎಕರೆ ಪ್ರದೇಶದಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಈ ಸ್ಟೇಡಿಯಂ ಹಲ ವೈಶಿಷ್ಟ್ಯತೆಗಳನ್ನು ಹೊಂದಲಿದೆ.

ಇಲ್ಲಿಯವರೆಗೆ ದಾವಣಗೆರೆ ಹಳೆ ಭಾಗದಲ್ಲಿ ಕ್ರೀಡಾಪಟುಗಳಿಗೆ ಅನುಕೂಲ ವಾಗುವಂತಹ ಕ್ರೀಡಾಂಗಣಗಳು  ಇರಲಿಲ್ಲ. ಕ್ರೀಡೆಗಳಲ್ಲಿ ಭಾಗವಹಿಸಲು ಅಥವಾ ಕ್ರೀಡಾಭ್ಯಾಸಕ್ಕೆಂದು ಜಿಲ್ಲಾ ಕ್ರೀಡಾಂಗಣ, ನೇತಾಜಿ ಸುಭಾಶ್ ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣ, ಹೈಸ್ಕೂಲ್ ಮೈದಾನ ಅಥವಾ ಖಾಸಗಿ ಶಾಲಾ ಕ್ರೀಡಾಂಗ ಣಗಳನ್ನು ಆಶ್ರಯಿಸಬೇಕಾಗಿತ್ತು. ಹಳೆಯ ಭಾಗದ ಶಾಲಾ ಮಕ್ಕಳಿಗೆ  ಕ್ರೀಡಾಕೂಟಗಳನ್ನು ನಡೆಸಲು ಶಿಕ್ಷಕರು ಹರಸಾಹಸ ಪಡಬೇಕಾಗಿತ್ತು. ಇಂತಹ ಎಲ್ಲಾ ಸಮಸ್ಯೆಗಳಿಗೆ ನೂತನ ಸ್ಟೇಡಿಯಂ ಪರಿಹಾರ ನೀಡಬಲ್ಲದು.

ಇತ್ತೀಚಿನ ದಿನಗಳಲ್ಲಿ ಮುಂಜಾನೆ ವೇಳೆ ಅದರಲ್ಲೂ ವಾರದ ರಜಾ ದಿನಗಳಲ್ಲಿ ಜಿಲ್ಲಾ ಕ್ರೀಡಾಂಗಣವು ಕ್ರೀಡಾಪಟುಗಳು, ವಾಯು ವಿಹಾರಿಗಳಿಂದ ತುಂಬಿ ಹೋಗುತ್ತಿತ್ತು. ಅನೇಕರು ಕ್ರೀಡಾಭ್ಯಾಸಕ್ಕೆ ಜಾಗವಿಲ್ಲವೆಂದು ವಾಪಾಸ್ ಹೋಗುತ್ತಿದ್ದುದೂ ಉಂಟು. ಆದರೆ ಇದೀಗ ನಿರ್ಮಿಸಲಾಗುವ ನೂತನ ಕ್ರೀಡಾಂಗಣ ದಾವಣಗೆರೆ  ಕ್ರೀಡಾಪಟುಗಳ ಸಾಧನೆಗೆ ಕೊಡುಗೆ ನೀಡಲಿದೆ.

ಜನತೆ ಮಾಗಾನಹಳ್ಳಿ ಕಡೆಯಿಂದ ಇತ್ತ ಬರಲು ಎರಡು ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್ ನಿರ್ಮಿಸಲೂ ಸಹ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧಿಕಾರಿಗಳು ಮುಂದಾಗಿದ್ದರಾರೆ.

ಸ್ಮಾರ್ಟ್ ಸಿಟಿಯ ಬಹುಪಾಲು ಯೋಜ ನೆಗಳು ಹೊಸ ಭಾಗಕ್ಕಷ್ಟೇ ಮೀಸಲಾಗುತ್ತವೆ ಎಂಬ ಆರೋಪ ಈ ಯೋಜನೆಯಿಂದ ತುಸು ಕಡಿಮೆಯಾಗಬಹುದು.


ಎಸ್.ಎಸ್.ಎಂ. ನಗರದಲ್ಲೊಂದು ಸ್ಮಾರ್ಟ್ ಸ್ಟೇಡಿಯಂ - Janathavaniಕೆ.ಎನ್. ಮಲ್ಲಿಕಾರ್ಜುನ ಮೂರ್ತಿ,
[email protected]

error: Content is protected !!