ದಾವಣಗೆರೆ ಕುಂಬಾರ ಪೇಟೆ ವಾಸಿ, ಕಾಲೇಜ್ ಆಫ್ ಡೆಂಟಲ್ ಸೈನ್ಸ್ ನೌಕರರಾದ ಕುಂಬಾರ ತಿಪ್ಪೇಸ್ವಾಮಿ ಇವರ ಪುತ್ರ, ಜೈನ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಮಧು ಟಿ. ಕುಂಬಾರ (22) ಅವರು ದಿನಾಂಕ 08.09.2020ರ ಮಂಗಳವಾರ ಮಧ್ಯಾಹ್ನ 3.20 ಕ್ಕೆ ನಿಧನರಾದರು. ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 09.09.2020ರ ಬುಧವಾರ ಬೆಳಿಗ್ಗೆ 10.30ಕ್ಕೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
February 25, 2025