ಕೊರೊನಾ ಸಂಕ್ರಮಣದಿಂದ ಮುಕ್ತಿ ಇದೆಯೋ ಅಥವಾ ಮೋಕ್ಷವಿದೆಯೋ…

ಕೊರೊನಾ ವೈರಸ್‍ನಿಂದ ಮುಕ್ತಿಯಂತು ಇಲ್ಲ. ಆದರೆ ಕೊರೊನಾ ಇರುವುದರಿಂದ ನಮ್ಮಲ್ಲೇ ಇರುವ ಅನೇಕ ಕೆಟ್ಟ ಅಭ್ಯಾಸಗಳಿಗೆ ಮುಕ್ತಿ ಇದೆ. ಮನುಷ್ಯನಲ್ಲಿ ಎಲ್ಲಿಯವರೆಗೆ ಶಿಸ್ತು ಮತ್ತು ಒಳ್ಳೆಯ ಅಭ್ಯಾಸಗಳು ರೂಢಿಗೆ ಬರುವುದಿಲ್ಲವೋ ಅಲ್ಲಿಯವರೆಗೆ ಒಂದಲ್ಲಾ ಒಂದು ವೈರಾಣು ಮನುಷ್ಯರಿಗೆ ಮಾರಕವಾಗಿರುತ್ತದೆ.
ಯಾರಾದರೂ ಕೊರೊನಾ ವೈರಸ್ಸನ್ನು ಭೂಮಿಯಿಂದ ಮುಕ್ತಿಗೊಳಿಸಬಹುದು ಎಂದುಕೊಂಡಿದ್ದರೆ, ಆ ಭ್ರಮೆಯಲ್ಲಿ ಇರುವುದು ಬೇಡ, ಭೂಮಿಯ ಮೇಲೆ ಮನುಷ್ಯ ಇರುವವರೆಗೂ ಕೊರೊನಾ ವೈರಸ್ ಸಹ ಇದ್ದೇ ಇರುತ್ತದೆ.
ನಾವೇನಾದರೂ ಊರಿಗೆ – ನಗರಕ್ಕೆ ಬ್ಯಾರಿಕೇಡ್ ಹಾಕಿ (ಅಡ್ಡಗಟ್ಟಿ), ನಮ್ಮ ಓಣಿಗೆ – ಮನೆಯ ಮುಂದೆ, ಜಾಲಿ ಮುಳ್ಳಿನ ಬೇಲಿ ಹಾಕಿ ಕೊರೊನಾದಿಂದ ಮುಕ್ತರಾಗುತ್ತೇವೆಂದು ಭಾವಿಸಿದರೆ, ಅದು ತಪ್ಪು ಕಲ್ಪನೆ – ಭ್ರಮೆಯೇ ಸರಿ
ಒಂದು ಗಮನಿಸುವ ವಿಚಾರವೇನೆಂದರೆ, ಎಲ್ಲಾ ತರಹದ ರಕ್ಷಣಾ ಕವಚ ಮತ್ತು ಸಲಕರಣೆಗಳನ್ನು ಉಪಯೋಗಿಸಿಯೂ, ಕೊರೊನಾ ವೈರಸ್ ರೋಗಿಗಳ ಸೇವೆಯಲ್ಲಿದ್ದ ಸುಮಾರು 15-16 ಸಾವಿರ covid warriors ಗಳಲ್ಲಿ ಸೋಂಕು ತಗುಲಿದ ನಿದರ್ಶನ Spain, Amarica, ಮತ್ತು Europe ನ ಬಹಳಷ್ಟು ದೇಶಗಳಲ್ಲಿ ಕಂಡಿದ್ದೇವೆ. ಇದರ ಅರ್ಥವೇನೆಂದರೆ, ನಾವು ಎಷ್ಟೇ ಜಾಗರೂಕತೆಯಿಂದ ಇದ್ದರೂ ವೈರಸ್‍ನ ಸೋಂಕಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.
ಸುಮಾರು 35 ಕೋಟಿ ಜನಸಂಖ್ಯೆಯಿರುವ, ಅಭಿವೃದ್ದಿ ಹೊಂದಿದ ದೇಶವಾದ ಅಮೇರಿಕಾದಲ್ಲಿ, ವೈರಸ್‍ಗಳಿಗೆ ಹೇಳಿ ಮಾಡಿಸಿದಂತಹ ಛಳಿಯ ವಾತಾವರಣ ಹಾಗೂ ಬಹುತೇಕ ವಯೋವೃದ್ದರಿದ್ದರೂ, ಕಳೆದ 2 ತಿಂಗಳುಗಳ ಕಾಲ Covid ತನ್ನ ಅಟ್ಟಹಾಸ ಮೆರೆದಿದ್ದರೂ, ಇದುವರೆಗೂ ಸಾವಿನ ಸಂಖ್ಯೆ 1 ಲಕ್ಷ ಮೀರಲಾಗಲಿಲ್ಲ. ಇದರ ಅರ್ಥವೇನೆಂದರೆ ಈ ವೈರಾಣುವಿನ ಮಾರಕ ಕ್ಷಮತೆ ನಾವು ಊಹಿಸಿದಷ್ಟಿಲ್ಲ. ಅದರಲ್ಲೂ ಸಾವನ್ನಪ್ಪಿರುವ ಜನರನ್ನು ವಿಶ್ಲೇಷಿಸಿದರೆ – ಅದರಲ್ಲಿ ಬಹುತೇಕ ಜನರಲ್ಲಿ ರೋಗ ನಿರೋಧಕ ಶಕ್ತಿ ಕುಂದಿದ್ದು, ಅವರು ಬೇರೆ ಯಾವ ವೈರಸ್ ಅಥವಾ ಕೀಟಾಣುಗಳ ಸೋಂಕು ತಗುಲಿದ್ದರೂ ಸಹ ಅದರ ಪರಿಣಾಮದಲ್ಲಿ  ಬದಲಾವಣೆ ಆಗುತ್ತಿದ್ದಿಲ್ಲ.
ಪ್ರಪಂಚದಲ್ಲಿ ಅತ್ಯುತ್ತಮವಾದ ಆರೋಗ್ಯ ವ್ಯವಸ್ಥೆ ಹೊಂದಿರುವಂತಹ ಪಾಶ್ಚಿಮಾತ್ಯ ದೇಶಗಳೇ ಕೊರೊನಾ ವಿರುದ್ದದ ಸೆಣೆಸಾಟದಲ್ಲಿ ಮಂಡಿಯೂರಿವೆ. ಏಕೆಂದರೆ ಆ ದೇಶಗಳು ಕೊರೊನಾ ವೈರಸ್ಸನ್ನು ಕೇವಲವಾಗಿ ಭಾವಿಸಿದ್ದವು (Under Estimated ). ಅದೇ ತರಹ ನಮ್ಮ ದೇಶದಲ್ಲಿ ಕೊರೊನಾವನ್ನು ಅತಿಯಾಗಿ ಅಂದಾಜು (Over Estimated)  ಮಾಡಿಕೊಂಡಿದ್ದೇವೆ. ಆದ್ದರಿಂದಲೇ Lockdown 45 ದಿನವಾದರೂ ಮುಂದುವರಿಸುತ್ತಲೇ ಇದ್ದೇವೆ.
ಈ ಹಿಂದೆ 2008-2009 ರಲ್ಲಿ ಬಂದಂತಹ ವೈರಲ್ ಫ್ಲೂ ಗಳಾದ ಹಂದಿ ಜ್ವರ(H1N1), ಹಕ್ಕಿ ಜ್ವರ (Bird flu)  ಇವುಗಳಿಗೆ ಹೋಲಿಸಿದರೆ covid  ನ ಮಾರಕ ಕ್ಷಮತೆ ಕೇವಲ 5% ರಿಂದ 6% ಮಾತ್ರ ಹೆಚ್ಚು. ನೀವು ಗಮನಿಸಿದ ಹಾಗೆ ಆ ಕಾಲದಲ್ಲಿ ವೈದ್ಯರಾಗಲೀ ಅಥವಾ ರೋಗಿಯಾಗಲೀ ಇಷ್ಟೊಂದು ಭಯಭೀತರಾಗಿದ್ದಿಲ್ಲ. ಆದರೆ ಈಗ ಕೋವಿಡ್‌-19 ಗೆ ಯಥೇಚ್ಛ ಪ್ರಚಾರ ಸಿಕ್ಕು, ಮಾಧ್ಯಮಗಳಲ್ಲಿ ಅದನ್ನು ಯಮನೆಂದೇ ಬಿಂಬಿಸಲಾಗಿದೆ. ಅಂದರೆ ಯಾರಿಗಾದರೂ covid ನ ಸೋಂಕು ತಗುಲಿದರೆ ಬಹಳಷ್ಟು ತೊಂದರೆಗೀಡಾಗುತ್ತಾರೆ ಅಥವಾ ಸಾವನ್ನಪ್ಪುತ್ತಾರೆ ಎಂಬ ಭಯ ಮತ್ತು ಭ್ರಾಂತಿ ಮೂಡಿಸಲಾಗಿದೆ. ಇದರಿಂದ ಇಡೀ ದೇಶದಲ್ಲಿ FEAR PSYCHOSIS  ವಾತಾವರಣ ಸೃಷ್ಟಿಯಾಗಿದೆ.
ಹಾಗಾದರೆ ಕೊರೊನಾವನ್ನು ತಡೆಗಟ್ಟಲು ನಾವು ತೆಗೆದುಕೊಳ್ಳುತ್ತಿರುವ ಕ್ರಮ ಸರಿಯಿದೆಯೇ?
ಹೌದು ನಾವು ಭಾಗಶಃ ಸರಿಯಾಗಿದ್ದೇವೆ, ಇದುವರೆಗೂ ಕೈಗೊಂಡಿರುವ ಕ್ರಮಗಳಲ್ಲಿ, ನಾವು ಆಡಿರುವ  ರೀತಿ ನೋಡಿದರೆ ತಲ್ಲಣದ ಪ್ರತಿಕ್ರಿಯೆ (Panic Reacation)ತರಹ ಜಾಸ್ತಿ ಇದೆ. ಇದೆಲ್ಲ ನಡೆದದ್ದು ಏಕೆಂದರೆ ನಮಗೆ ಈ ವೈರಸ್ ಮತ್ತು ಇದರಿಂದಾಗುವ ಅನರ್ಥಗಳು ಮತ್ತು ಮಾರಕತೆಯ ಬಗ್ಗೆ ತಿಳುವಳಿಕೆ ಕಮ್ಮಿ ಇದ್ದುದರಿಂದ ಈ ರೀತಿ ನಡೆದುಕೊಂಡಿರುತ್ತೇವೆ.
Lockdown ನಿಂದಾಗಿ ವೈರಸ್ ಹರಡುವ ನಾಗಾ ಲೋಟಕ್ಕೆ ಕಡಿವಾಣ ಹಾಕಿಂದತಾಗಿದೆ. ಮತ್ತು ನಮ್ಮಲ್ಲಿರುವ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ವೈರಾಣುವಿನ ವಿರುದ್ದ ಹೋರಾಡಲು ಸನ್ನದ್ಧರಾಗಲು ಸಮಯ ಸಿಕ್ಕಿದೆ. ಹಾಗೂ ನಾಗರಿಕರಿಗೆ ಕೊರೊನಾ ಕಾಯಿಲೆಯ ಮತ್ತು ಸಾಮಾಜಿಕ ಅಂತರದ ಬಗ್ಗೆ ಜಾಗರೂಕತೆ ಮೂಡಿಸುವಂತಾಗಿದೆ. ಇದರಿಂದ ವೈರಾಣುವಿನ ಹರಡುವಿಕೆಯನ್ನು ಕಡಿಮೆ ಮಾಡಬಹುದೇ ವಿನಃ ಸಂಪೂರ್ಣವಾಗಿ ವೈರಾಣುವನ್ನು ನಿಷ್ಕ್ರಿಯಗೊಳಿಸಲಾಗುವುದಿಲ್ಲ. ಶಾಲೆಗಳು, ಕಾಲೇಜ್‍ಗಳು, ಆಫೀಸ್‍ಗಳು, ಕಾರ್ಖಾನೆಗಳು, ವ್ಯಾವಹಾರಿಕ ಜಾಗಗಳು, ಸಾರ್ವಜನಿಕ ಸಾರಿಗೆಗಳು ಇವುಗಳನ್ನು ಅನಿರ್ದಿಷ್ಟವಾಗಿ ನಿಲ್ಲಿಸಿ, ದೇಶವನ್ನು ಮತ್ತು ಅಲ್ಲಿನ ಜನರನ್ನು ಆರ್ಥಿಕ ಕಂಟಕಕ್ಕೆ ತಳ್ಳುವುದರಲ್ಲಿ ಯಾವ ಪ್ರಯೋಜನವಿಲ್ಲ.
ಹಾಗಾಗಿLockdown ನ ಲಾಭಗಳು ತಾತ್ಕಾಲಿಕ ಮತ್ತು ಸೀಮಿತ. ಇದನ್ನೇ ನಾವು ಬಹಳಷ್ಟು ತಿಂಗಳುಗಳ ಕಾಲ ನಡೆಸಲು ಸಾಧ್ಯವಿಲ್ಲ. ಏಕೆಂದರೆ ಈ ವೈರಾಣು ನಮ್ಮ ಜೊತೆಯಲ್ಲಿ ಇದ್ದೇ ಇರುತ್ತದೆ ಎಂಬುದು ಕಟುಸತ್ಯ ಮತ್ತು ದೇಶಕ್ಕೆ ಆರ್ಥಿಕ ಸಂಕಷ್ಟಗಳ ಸುನಾಮಿಯೇ ಎದುರಾಗುವ ಸಮಸ್ಯೆ ಕಾಡುತ್ತಿದೆ.
ವೈರಾಣುವಿನ ಸೋಂಕನ್ನು ತಡೆಯಲು ಕೇವಲ 2 ಮಾರ್ಗಗಳಿವೆ :
ನಮ್ಮ ದೇಹದಲ್ಲಿ ವೈರಾಣುವಿನ ವಿರುದ್ದ ನೈಸರ್ಗಿಕವಾಗಿ Antibody  ಗಳು ಉತ್ಪತ್ತಿಯಾಗುವುದು.
ಲಸಿಕಾ ವಿಧಾನದಿಂದ (vaccination) Antibody  ಗಳು ಉತ್ಪತ್ತಿಯಾಗುವುದು.
ನಮ್ಮ ದೇಹದಲ್ಲಿ ನೈಸರ್ಗಿಕವಾಗಿ Antibody  ಗಳು ಉತ್ಪತ್ತಿಯಾಗಬೇಕೆಂದರೆ ನಾವು ಆ ವೈರಾಣುವಿನಿಂದ ಸೋಂಕಿತರಾಗಿ ಗುಣಮುಕ್ತರಾಗಬೇಕು. ಈ ಮೇಲಿನ ಕ್ರಿಯೆಯಿಂದಲೇ vaccination ಪದ್ಧತಿಯ ಮೂಲಕ ನಮ್ಮ ದೇಹದಲ್ಲಿ ವೈರಾಣುವಿನ ವಿರುದ್ದ ಅರ್ಜಿಸಿದ ರಕ್ಷಣೆಯನ್ನು (Aquired Immunity)  ಸಹ ಪಡೆಯಬಹುದು.
ಒಂದು ಲಸಿಕೆಯನ್ನು (vaccine) ಕಂಡುಹಿಡಿದು, ಅದನ್ನು ಸಾಮಾನ್ಯ ಜನರು ಮತ್ತು ರೋಗಿಗಳ ಮೇಲೆ ಪ್ರಯೋಗ ಮಾಡಿ, ಅದು ಲಾಭಕಾರಿಯೇ ಎಂದು ದೃಢಪಡಿಸಿ, ಜನ ಸಾಮಾನ್ಯರ ಉಪಯೋಗಕ್ಕೆ ತರಬೇಕೆಂದರೆ, ಸುಮಾರು ಒಂದರಿಂದ ಒಂದೂವರೆ ವರ್ಷಗಳ ಕಾಲ ಬೇಕಾಗುತ್ತದೆ. ಅಲ್ಲಿಯವರೆಗು ಇದೇ ತರಹದ Lockdown ಮುಂದುವರೆಸಲು ಸಾಧ್ಯವೇ ???
ಒಂದು ವಿಚಾರ ಗಮನಿಸಿಬೇಕಾದರೆ ಔಷಧಗಳಿಂದ ಈ ಕೊರೊನಾ ಸಾಂಕ್ರಾಮಿಕವನ್ನು ತಡೆಯಲು ಸಾದ್ಯವಿಲ್ಲ. ಔಷಧಿಗಳಿಂದ  ಕೇವಲ ಚಿಕಿತ್ಸೆ ಮಾಡಬಹುದಷ್ಟೆ.
ಕೊರೊನಾ ವೈರಸ್‍ನ ಸೋಂಕಿನ ವಿಶ್ಲೇಷಣೆ:
ಸುಮಾರು ನೂರು ಜನರಿಗೆ ಈ ವೈರಾಣುವಿನಿಂದ ಸೋಂಕು ತಗುಲಿದರೆ, ಅದರಲ್ಲಿ 65 ರಿಂದ 70% ಜನರಿಗೆ 70% ಜನರಿಗೆ ತಮ್ಮಲ್ಲಿ ವೈರಸ್‍ನ ಸೋಂಕು ಯಾವಾಗ ಬಂದಿದೆ – ಯಾವಾಗ ಹೋಗಿದೆ ಅನ್ನುವುದರ ಅರಿವೇ ಇರುವುದಿಲ್ಲ.
ಇನ್ನು ಸುಮಾರು 15 ರಿಂದ 20% ಜನರಲ್ಲಿ Mild – Moderate ಲಕ್ಷಣಗಳಿರುತ್ತವೆ.
ಸುಮಾರು 5 ರಿಂದ 10% ಜನರಲ್ಲಿ ಲಕ್ಷಣಗಳು ತೀವ್ರವಾಗಿ ಕಂಡುಬಂದು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ.
ಸುಮಾರು 0.5 ರಿಂದ 1 % ರೋಗಿಗಳಿಗೆ ಮಾತ್ರ ICU – ತೀವ್ರ ನಿಗಾ ಘಟಕದ ಚಿಕಿತ್ಸೆ ಬೇಕಾಗಬಹುದು.
ಸೋಂಕಿನ ತೀವ್ರತೆ ಬಹಳಷ್ಟು ಆಗುವ ಜನರು ಯಾರೆಂದರೇ ಹಿರಿಯ ವಯಸ್ಕರು (more than 60 years) ಮತ್ತು (co-morbid conditions) ಗಂಭೀರ ಕಾಯಿಲೆಗಳ ಹಿನ್ನೆಲೆ ಉಳ್ಳವರು.
ಸಮುದಾಯದಲ್ಲಿ ಎಲ್ಲಿಯವರೆಗೆ ಸುಮಾರು 60 ರಿಂದ 70 % ಜನರಲ್ಲಿ ರೋಗ ನಿರೋಧಕ ಶಕ್ತಿ(Herd Immunity) ಬರುವುದಿಲ್ಲವೋ, ಅಲ್ಲಿಯ ವರೆಗೆ ಯಾವ ಸಾಂಕ್ರಾಮಿಕ ರೋಗವನ್ನು ತಡೆಯಲು ಸಾಧ್ಯವಿಲ್ಲ. ಇದು ಆಗಬೇಕೆಂದರೆ ಮನುಷ್ಯನು ಮೇಲೆ ತಿಳಿಸಿರುವ Antibody ಉತ್ಪನ್ನ ಮಾಡುವ 2 ಮಾರ್ಗಗಳಲ್ಲಿ (ಕೇವಲ ಸೋಂಕಿತನಾಗಿ – ಗುಣಮುಕ್ತರಾಗಿ) ದೇಹದಲ್ಲಿ ರೋಗ ನಿರೋಧಕ ಶಕ್ತಿ ಬರುವ ಹಾಗೆ ಮಾಡುವುದೊಂದೇ ದಾರಿ ಉಳಿದಿದೆ.
ನಮ್ಮ ದೇಶದಲ್ಲಿ ಇತರೆ ಸಾಂಕ್ರಾಮಿಕ ಕಾಯಿಲೆಗಳಾದ ಕ್ಷಯ ರೋಗ (TB), ಶ್ವಾಸಕೋಶದ ಸೋಂಕು Pnemonia ದಿಂದ ಮರಣ ಹೊಂದುವವರ ಸಂಖ್ಯೆಯನ್ನು ಗಮನಿಸಿದರೆ, ಕೊರೊನಾದಿಂದಾಗುವ ಸಾವಿನ ಸಂಖ್ಯೆ ಲೆಕ್ಕಕ್ಕೆ ಇಲ್ಲದಷ್ಟು.
ಹಾಗೆಯೇ ಹೃದಯ ಕಾಯಿಲೆ, ಸಕ್ಕರೆ ಕಾಯಿಲೆ, ಮೆದುಳು ರಕ್ತ ಸ್ರಾವ, ಅಪಘಾತಗಳಿಂದ ಸಂಭವಿಸುವ ಸಾವುಗಳಿಗೆ ಹೋಲಿಸಿದರೆ, ಕೇವಲ ಕೊರೊನಾದಿಂದಾಗುವ ಸಾವುಗಳು ಯಾವ ಲೆಕ್ಕಕ್ಕೂ ಇಲ್ಲ. ಅದೇ ತರಹ ಶ್ವಾಸಕೋಶದ ಸೋಂಕು ತಗಲಿಸುವ ಬೇರೆ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಮಾರಕ ಶಕ್ತಿಯನ್ನು ಹೋಲಿಸಿದರೆ ಕೋವಿಡ್‍ನ ಶಕ್ತಿ ಸ್ವಲ್ಪನೆ (3-5%) ಜಾಸ್ತಿ ಇರಬಹುದಷ್ಟೇ.ನಾವು ದಿನನಿತ್ಯವು ಮಾಧ್ಯಮಗಳಲ್ಲಿ ಸೋಂಕಿನ ಅಂಕಿ-ಅಂಶಗಳನ್ನು ಗಮನಿಸುತ್ತಿದ್ದರೆ, ಅದು ಭೀತಿಯುಂಟು ಮಾಡಿ ನಮ್ಮನ್ನು ತಪ್ಪು ದಾರಿಗೆ ತಳ್ಳುತ್ತಿದೆ. ಯಾಕೆಂದರೆ ಈ ಮೊದಲು ತಿಳಿಸಿದ ಹಾಗೆ ವೈರಸ್ ಪಾಸಿಟಿವ್ ಅಂದಾಕ್ಷಣ ರೋಗಿಗೆ ಕ್ಲಿಷ್ಟಕರ ಸಮಯ ಮತ್ತು ಸಾವಿಗೀಡಾಗುತ್ತಾನೆಂದು ಬಿಂಬಿಸಲಾಗಿದೆ. ಆದ್ದರಿಂದ ನಾವು ಅಂಕಿ-ಅಂಶಗಳನ್ನು ಈ ಕೆಳಗಿನ ರೀತಿಯಲ್ಲಿ ವಿಶ್ಲೇಷಿಸಬೇಕು.
Covid Positive  +  Asymptomatic (ಕಾಯಿಲೆಯ ಯಾವುದೇ ಲಕ್ಷಣ ಇಲ್ಲದಿರುವುದು)
Covid Positive  +  Mild / Moderate symptoms (ಕಾಯಿಲೆಯ ಸಾಧಾರಣ ಲಕ್ಷಣ ಇರುವುದು).
Covid Positive  +  Severe symptoms  (ಕಾಯಿಲೆಯ ತೀವ್ರ ಲಕ್ಷಣ ಇರುವುದು)
Covid Positive  + ICU Dependent  (ತೀವ್ರ ನಿಗಾ ಘಟಕದ ಅವಶ್ಯಕತೆ ಇರುವುದು)
ಇವುಗಳಲ್ಲಿ ಮೊದಲ 2 ಕಲಂ ಗಳಲ್ಲಿ ಸುಮಾರು 90 – 95 % ರೋಗಿಗಳು ಸೇರುತ್ತಾರೆ.
ಹೀಗಿರುವಾಗ ಕೋವಿಡ್‍ನಿಂದ ಹೆದರಿಕೊಂಡು ಪಂಜರಲ್ಲಿರುವುದು ಎಷ್ಟು ಸೂಕ್ತ ???
ಈಗ ನಾವು Lockdown  ನಿಂದ ಹೊರಗೆ ಬರಲೇಬೇಕು, ಏಕೆಂದರೆ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ (Herd Immunity) ಹೆಚ್ಚಿಸಲೇಬೇಕು, ಮತ್ತು ಕಂಗೆಟ್ಟಿರುವ ಆರ್ಥಿಕ ಸ್ಥಿತಿಯನ್ನು ಸುಧಾರಿಸಲೇಬೇಕು.
ಕಳೆದ 2 ತಿಂಗಳಿಂದ ನಡೆದಿರುವ ವಿದ್ಯಮಾನಗಳಿಂದಾಗಿ ಆರ್ಥಿಕ ಸಂಕಷ್ಟದಿಂದಾಗಿರುವ ದುಷ್ಪರಿಣಾಮಗಳಿಂದ ಜೀವ ಮತ್ತು ಜೀವನ ಎರಡಕ್ಕೂ ಹೊಡೆತ ಬಿದ್ದಿದೆ.
ಇದನ್ನೆಲ್ಲಾ ಗಮನಿಸುತ್ತಿದ್ದರೆ ಮೇಲ್ನೋಟಕ್ಕೆ ಕಾಣಿಸಿಕೊಳ್ಳುವ ಕಟು ಸತ್ಯವೇನೆಂದರೆ ನಾವು ಕೊರೊನಾ ವೈರಸ್ ಜೊತೆ ಬದುಕಲೇಬೇಕು ಹಾಗೂ ವೈರಸ್ ಜೊತೆ ಬದುಕಲು ಸೂಕ್ತ ದಾರಿಯನ್ನು ರೂಪಿಸಿಕೊಳ್ಳಬೇಕು.
ಜೀವನದಲ್ಲಿ ಸ್ವಲ್ಪ ಶಿಸ್ತು ಮತ್ತು ಸಂಯಮವನ್ನು ಅಳವಡಿಸಿಕೊಂಡು ಕೆಳಗಿನ ನವ ಸೂತ್ರಗಳನ್ನು ಪಾಲಿಸಬೇಕಾಗುತ್ತದೆ.
ಮನೆಯಿಂದ ಹೊರಗಿದ್ದಾಗ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು(Social Distancing)
ಮನೆಯಿಂದ ಹೊರಗಿದ್ದಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು
* ಎಲ್ಲೆಂದರಲ್ಲಿ ಉಗುಳದೇ ಇರುವುದು
* ಆಗಿಂದಾಗ್ಗೆ ಸಾಬೂನಿನಿಂದ ಕೈ ತೊಳೆಯುವುದು
* ಸ್ಯಾನಿಟೈಸರ್ ಬಳಸುವುದು
* ವೃದ್ದರನ್ನು ಮತ್ತು ಮಕ್ಕಳನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವುದು
* ನಮ್ಮ ಸ್ವಲ್ಪ ಸಮಯ ಮತ್ತು ಹಣವನ್ನು ನಮ್ಮ ಆರೋಗ್ಯಕ್ಕಾಗಿ ಮೀಸಲಿಡುವುದು
* ನಮ್ಮ ಗ್ರಾಮ, ಪಟ್ಟಣ, ನಗರಗಳನ್ನು ಸ್ವಚ್ಛವಾಗಿಡುವುದು
* ಸಕಾರಾತ್ಮಕ ಮತ್ತು ಗುಣಾತ್ಮಕ ಮನೋಭಾವದಿಂದ ವೈರಸ್ಸನ್ನು ಎದುರಿಸುವುದು
ಈ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು – ಪಾಲಿಸುವುದರಿಂದ ಇನ್ನು ಮುಂದೆ ಕೊರೊನಾದಂತಹ ನೂರಾರು ವೈರಾಣುಗಳಾಗಲೀ, ಕೀಟಾಣುಗಳಾಗಲೀ ಬಂದರೂ ನಾವು ಈಗಿರುವಂತಹ ಸಂದಿಗ್ಧ ಪರಿಸ್ಥಿತಿಗೆ ಸಿಲುಕುವುದಿಲ್ಲ.
ಭೂಮಿಯ ಮೇಲಿನ ಅಸಂಖ್ಯಾತ ಜೀವರಾಶಿಗಳನ್ನು ಮತ್ತು ಪರಿಸರವನ್ನು ಗೌರವಿಸಿ, ಅವುಗಳಿಗಿರುವ ಸ್ವಾತಂತ್ರ್ಯಕ್ಕೆ ಕುಂದು ಬರದ ಹಾಗೆ ನೋಡಿಕೊಂಡು, ಅವುಗಳ ಸಂರಕ್ಷಣೆ ಕಡೆಗೆ ಗಮನ ಹರಿಸಿದರೆ ಮಾತ್ರ ಮಾನವ ಸಂಕುಲಕ್ಕೆ ಇಂತಹ ವಿಪತ್ತುಗಳಿಂದ ಮೋಕ್ಷವಿದೆ.


ಡಾ|| ಬಿನಯ್ ಕುಮಾರ್ ಸಿಂಗ್
ಸನ್‍ಶೈನ್ ಪುರಂತರ ಆಸ್ಪತ್ರೆ.
ಡಾ|| ಮನೋಜ್ ಕುಮಾರ್ ಪೂಜಾರ್‌
ಪೂಜಾ ಮಕ್ಕಳ ಆಸ್ಪತ್ರೆ.

error: Content is protected !!