ಮೀನುಗಾರರಿಗೆ ಬಲೆ, ತೆಪ್ಪ ವಿತರಣೆ

ಮಲೇಬೆನ್ನೂರು, ಮಾ.29- ಮೀನುಗಾರಿಕೆ ಇಲಾಖೆಯಿಂದ ಮಂಜೂರಾಗಿ ಬಂದಿರುವ ಮೀನು ಹಿಡಿಯುವ ಬಲೆ, ತೆಪ್ಪ ಹಾಗೂ ಇತರೆ ಸಲಕರಣೆಗಳನ್ನು ಶಾಸಕ ಎಸ್‌. ರಾಮಪ್ಪ ಅವರು ಶನಿವಾರ ಹರಿಹರ ತಾಲ್ಲೂಕಿನ ವಿವಿಧ ಹಳ್ಳಿಗಳ ಮೀನುಗಾರರಿಗೆ ವಿತರಣೆ ಮಾಡಿದರು. ಗಂಗಾಮತ ಸಮಾಜದ ಮುಖಂಡರಾದ ಕುಂಬಳೂರು ಬಸವರಾಜಪ್ಪ, ಗೋವಿನಹಾಳ್‌ ಚಂದ್ರಪ್ಪ ಸೇರಿದಂತೆ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!