ಕೊಮಾರನಹಳ್ಳಿ : ಶಂಕರಲಿಂಗ ಭಗವಾನ್‌ ಸರಸ್ವತಿ ಪರಮಹಂಸರ ಆರಾಧನೆಗೆ ತೆರೆ

ಮಲೇಬೆನ್ನೂರು, ಮಾ 19 –  ಕೊಮಾರನಹಳ್ಳಿಯ ಶ್ರೀ ರಂಗನಾಥ ಸ್ವಾಮಿ ಆಶ್ರಮದಲ್ಲಿ ಒಂದು ವಾರದಿಂದ ನಡೆಯುತ್ತಿದ್ದ ಶಂಕರಲಿಂಗ ಭಗವಾನ್‌ ಸರಸ್ವತಿ ಪರಮಹಂಸರ 68ನೇ ಆರಾಧನಾ ಮಹೋತ್ಸವಕ್ಕೆ  ಮಂಗಳವಾರ ತೆರೆ ಬಿದ್ದಿತು. ಆರಾಧನಾ ಮಹೋತ್ಸವದ ಪ್ರಯುಕ್ತ  ಭಕ್ತರು ಸಾಮೂಹಿಕವಾಗಿ ಅಖಂಡ ಗುರು ಭಜನೆ, ಗುರುಚರಿತ್ರೆ, ಸಪ್ತಶತಿ, ಭಗವದ್ಗೀತೆ, ಗುರು ಕಥಾಮೃತ ಪಾರಾಯಣ ಮಾಡಿ ಗುರು ಪಾದುಕೆಗೆ ರುದ್ರಾಭಿಷೇಕ ಮಾಡಿದರು.

ತೀರ್ಥನಾರಾಯಣ ಪೂಜೆ, ಮಹಾಭಾರತ, ರಾಮಾಯಣ ವಾಚನ, ಭಜನೆ, ಅಷ್ಟಾವಧಾನದ ಮಂಗಳ ಕಾರ್ಯಕ್ರಮ ನಡೆದವು. ಟ್ರಸ್ಟ್ ನವರು ವಿದ್ವಾಂಸರನ್ನು ಸನ್ಮಾನಿಸಿದರು. ಆಶ್ರಮದ ಆವರಣದಲ್ಲಿ ಭಕ್ತರು ಅಲಂಕೃತ ಶಂಕರಲಿಂಗ ಭಗವಾನರ ಭಾವಚಿತ್ರದ ಪಲ್ಲಕ್ಕಿ ಉತ್ಸವ ಮಾಡಿದರು. ಆಶ್ರಮವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಿದ್ದರು. ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

error: Content is protected !!