ಹೊನ್ನಾಳಿ: ಚಲುವಾದಿ ಸಮಾಜಕ್ಕೆ ಆಯ್ಕೆ

 ಹೊನ್ನಾಳಿ, ಮಾ.4-  ಸ್ಥಳೀಯ ಪ್ರವಾಸಿ ಮಂದಿರದಲ್ಲಿ ನೂತನ ತಾಲ್ಲೂಕು ಚಲುವಾದಿ ಸಮಾಜದ ಅಧ್ಯಕ್ಷರ ಆಯ್ಕೆ  ಹಾಗೂ ಚಲುವಾದಿ ಸಮಾಜದ ಸಭೆ ಇತ್ತೀಚೆಗೆ ನಡೆಯಿತು.

ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರುದ್ರಮುನಿ ಮಾತನಾಡಿದರು.ತಾಲ್ಲೂಕು ಚಲುವಾದಿ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆನಕನಹಳ್ಳಿ ನವೀನ, ದಾವಣಗೆರೆ ಸಮಾಜದ ಜಿಲ್ಲಾಧ್ಯಕ್ಷ ಶೇಖರಪ್ಪ, ಸಾಸ್ವೆಹಳ್ಳಿ ಎಸ್‍.ಹೆಚ್‍. ಕೃಷ್ಣಮೂರ್ತಿ ಮಾತನಾಡಿದರು.

ಸಮಾಜದ ನೂತನ  ಅಧ್ಯಕ್ಷರಾಗಿ ನವೀನ್ ಬೆನಕನಳ್ಳಿ, ಕಾರ್ಯಾಧ್ಯಕ್ಷ ಸಾಸ್ವೆಹಳ್ಳಿ ಹೆಚ್.ಎಸ್.  ಕೃಷ್ಣಮೂರ್ತಿ, ಗೌ. ಅಧ್ಯಕ್ಷ ಮಲೇಕುಂಬಳೂರು ಪಂಚಾಕ್ಷರಿ, ಉಪಾಧ್ಯಕ್ಷ ಮಾಸಡಿ ಮಹೇಶ, ಕಾರ್ಯದರ್ಶಿಯಾಗಿ ಸಚ್ಚಿನ್‍ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಡಾ ಜಗನ್ನಾಥ, ಉಮಾಮಹೇಶ್ವರ್, ಬಡಾವಣೆ  ರಾಜಣ್ಣ, ಮಂಜುನಾಥ ಕುರುವ, ಮಾಸಡಿ ಜಯ್ಯಪ್ಪ, ಮಹೇಶ್ವರ್, ಕುರುವ ಸಚ್ಚಿನ್‍, ಕೃಷ್ಣಮೂರ್ತಿ, ಮಲೇಕುಂಬಳೂರು ಪಂಚಾಕ್ಷರಿ, ಜಿ.ಹೆಚ್.ಹಾಲೇಶ್, ರಾಮಾಂ ಜನೇಯ, ಬೆನಕನಹಳ್ಳಿ ಯೇಸುದಾಸ್‍, ನಂದು, ರವಿ ಕುಮಾರ್‍ ಮತ್ತಿತರರಿದ್ದರು.

error: Content is protected !!