ಹರಪನಹಳ್ಳಿ : ಬಸ್ ಪಾಸ್ ಅವಧಿ ಮುಂದೂಡಿಕೆಗೆ ವಿಕಲಚೇತನರ ಮನವಿ

ಹರಪನಹಳ್ಳಿ, ಮಾ.3- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಕಲಚೇತನರಿಗೆ  ನೀಡುವ ರಿಯಾಯ್ತಿ ದರದ ಬಸ್‌ಪಾಸ್  ಅವಧಿಯನ್ನು ಮುಂದೂಡುವಂತೆ ರಾಜ್ಯ ವಿಕಲಚೇತನರ ಹಾಗೂ ವಿವಿಧೋದ್ಧೇಶ ಪುನರ್ವಸತಿ ಕಾರ್ಯಕರ್ತರ (ಎಂ.ಆರ್.ಡಬ್ಲ್ಯೂ) ಮತ್ತು ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ (ವಿ.ಆರ್.ಡಬ್ಲ್ಯೂ)  ಒಕ್ಕೂಟ (ರಿ) ತಾಲ್ಲೂಕು ಶಾಖೆ ವತಿಯಿಂದ  ಘಟಕಾಧಿಕಾರಿಗಳಿಗೆ  ಮನವಿ ಸಲ್ಲಿಸಲಾಯಿತು.

ಸಂಘದ ತಾಲ್ಲೂಕು ಅಧ್ಯಕ್ಷ ಆರ್. ಧನರಾಜ್ ಮಾತನಾಡಿದರು. ಈ  ಸಂದರ್ಭದಲ್ಲಿ  ಜುಂಜಪ್ಪ ಕೆ. ಹರಪನಹಳ್ಳಿ, ಬಿ.ಕೆ. ದುರುಗಪ್ಪ ಕಲ್ಲಹಳ್ಳಿ, ಉಮ್ಮೇಶ ಶಿಂಗ್ರಿಹಳ್ಳಿ, ದುರುಗಪ್ಪ ಹೆಚ್. ಅಡವಿಹಳ್ಳಿ,  ದೀಪಾ ಜಿ. ತೌಡೂರು, ಅಂಜಿನಪ್ಪ ಜಿ.  ಮೈದೂರು, ಇನ್ನಿತರರಿದ್ದರು.

error: Content is protected !!