ಬಂಡ್ರಿ ಗ್ರಾಮದಲ್ಲಿ ಸುಗಮ ಸಂಗೀತ

ಹರಪನಹಳ್ಳಿ, ಫೆ.17- ತಾಲ್ಲೂಕಿನ ಬಂಡ್ರಿ ಗ್ರಾಮದಲ್ಲಿ ಇತ್ತೀಚೆಗೆ ಚೌಡೇಶ್ವರಿ ವಿಶ್ವ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕೂಲಹಳ್ಳಿ ಸಂಸ್ಥಾನ ಮಠದ ಶ್ರೀ ಪಟ್ಟದ ಚಿನ್ಮಯಿ ಸ್ವಾಮಿಗಳು ನೆರವೇರಿಸಿದರು. ಈ ಸಂದರ್ಭದಲ್ಲಿ ಬಂಡ್ರಿ ಧರ್ಮ ಕರ್ತರಾದ ಮಂಜುನಾಥ ಸ್ವಾಮಿ, ಹಳ್ಳಿ ಸಣ್ಣ ಮರಿಗೋಣೆಪ್ಪ, ತಾ.ಪಂ. ಮಾಜಿ ಸದಸ್ಯ ಹಳ್ಳಿ ಚನ್ನಬಸಪ್ಪ, ಪಿ.ಎಲ್. ಪತ್ರ್ಯನಾಯ್ಕ, ಹನುಮಂತಪ್ಪ, ಎಂ. ಮೌನೇಶ್ವರ ಆಚಾರ್, ಬಣಕಾರ ಹಾಲಪ್ಪ, ಶಂಕ್ರಚಾರಿ, ಸಂಗಮೇಶ್ವರ ಇನ್ನಿತರರಿದ್ದರು.

error: Content is protected !!