ನಗರಸಭೆ ಸದಸ್ಯರಿಂದ ವಾಲ್ಮೀಕಿ ಶ್ರೀಗೆ ಸನ್ಮಾನ

ಹರಿಹರ, ಫೆ.17- ತಾಲ್ಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಶ್ರೀ ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಾರಂಭವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಶ್ರೀ ಪ್ರಸನ್ನಾನಂದಪುರಿ ಸ್ವಾಮಿಗಳನ್ನು ವಾಲ್ಮೀಕಿ ಮಠದಲ್ಲಿ ಹರಿಹರ ನಗರಸಭೆ ಸದಸ್ಯರು ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕೆ.ಜಿ. ಸಿದ್ದೇಶ್, ಎಂ.ಎಸ್. ಬಾಬುಲಾಲ್, ಮೆಹಬೂಬ್ ಬಾಷಾ, ಹನುಮಂತಪ್ಪ ಜೆಡಿಎಸ್ ಮುಖಂಡರಾದ ಹೊದಿಗೆರೆ ರಮೇಶ್, ಮಾರುತಿ ಬೇಡರ್, ಮೋಹನ್ ದುರುಗೋಜಿ, ಕಾಂಗ್ರೆಸ್ ಪಕ್ಷದ ಕೆ.ಮರಿದೇವ್ ಇನ್ನಿತರರು ಹಾಜರಿದ್ದರು.

error: Content is protected !!