ಹೊನ್ನಾಳಿ : ಕೊರೊನಾ ವಾರಿಯರ್ ಶಶಿಕಲಾ ಅವರಿಗೆ ಸಿಐಟಿಯು ಸನ್ಮಾನ

ಹೊನ್ನಾಳಿ, ಫೆ.16- ತನ್ನ ಮೇಲೆ ಹಲ್ಲೆ ನಡೆದರೂ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದ ನ್ಯಾಮತಿ ತಾಲ್ಲೂಕು ಬಿದರಹಳ್ಳಿ ಮೇಲಿನ ತಾಂಡದ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಬಾಯಿ ಅವರ ಸೇವೆಯನ್ನು ಪರಿಗಣಿಸಿ, ರಾಷ್ಟ್ರಮಟ್ಟದಲ್ಲಿ ಕೊರೊನಾ ವಾರಿಯರ್ಸ್  ದಿ ರಿಯಲ್ ಹೀರೋ ಪ್ರಶಸ್ತಿ ದೊರೆತಿದ್ದು, ಸಿಐಟಿಯು ವತಿಯಿಂದ ಸನ್ಮಾನಿಸಲಾಯಿತು.

ಪಟ್ಟಣದ ಕಿತ್ತೂರು ರಾಣಿ ಚೆನ್ನಮಮ ಸಮುದಾಯ ಭವನದಲ್ಲಿ ಸಿಐಟಿಯು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಉದ್ಘಾಟಿಸಿ, ಶಶಿಕಲಾ ಅವರನ್ನು ಸನ್ಮಾನಿಸಿ ಗೌರವಿಸಿದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿದರು. ತಾಲ್ಲೂಕು ಸಿಡಿಪಿಒ ಮಹಾಂತಸ್ವಾಮಿ, ತಹಶೀಲ್ದಾರ್ ಬಸವನಗೌಡ ಕೋಟೂರು, ಪ.ಪಂ. ಅಧ್ಯಕ್ಷ ಶ್ರೀಧರ್, ತಾಲ್ಲೂಕ ಪಂ. ಇಒ ಗಂಗಾಧರ ಮೂರ್ತಿ, ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ, ಸಹಾಯಕ ಸಿಡಿಪಿಒ ದೇನ್ಯಾನಾಯ್ಕ, ಅಂಗನವಾಡಿ ಕಾರ್ಯಕರ್ತೆಯರ ತಾಲ್ಲೂಕು ಅಧ್ಯಕ್ಷೆ ಲತಾಬಾಯಿ, ಗೀತಾ ಮತ್ತಿತರರು ಭಾಗವಹಿಸಿದ್ದರು. ಉಷಾದೇವಿ ಪ್ರಾರ್ಥಿಸಿದರು. ರೇಣುಕಾ ಸ್ವಾಗತಿಸಿ, ಗೀತಾ ವಂದಿಸಿದರು.

error: Content is protected !!