ರಂಗ ಕಲಾವಿದರಿಂದ ಬಸವರಾಜ ಐರಣಿ ಅವರಿಗೆ ರಂಗ ಗೌರವ

ದಾವಣಗೆರೆ, ಫೆ.16 – ನಗರದ ಶ್ರೀ ಪುಟ್ಟರಾಜ ಗವಾಯಿ ಕಲಾ ನಾಟಕ ಸಂಘದ ಕಲಾವಿದರಿಂದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ರಂಗ ಕಲಾವಿದ, ಪತ್ರಕರ್ತ ಬಸವರಾಜ ಐರಣಿ ಅವರಿಗೆ ನಗರದ ಬಸವ ಮುದ್ರಣ ಕಾರ್ಯಾಲಯದಲ್ಲಿ `ರಂಗ ಗೌರವ’ ಸಲ್ಲಿಸಿ ಸನ್ಮಾನಿಸಲಾಯಿತು.

ಕಲಾ ಸಂಘದ ಅಧ್ಯಕ್ಷ ಪಿ.ಮಲ್ಲಿಕಾರ್ಜುನ ಐರಣಿ ಮಾತನಾಡಿ, 5 ದಶಕಗಳಿಂದ ರಂಗಭೂಮಿಯಲ್ಲಿ ಕ್ರಿಯಾಶೀಲ ನಟ, ಸಂಘಟಕ, ಹೋರಾಟಗಾರ, ಲೇಖಕರಾಗಿ ಕಾರ್ಯನಿರ್ವಹಿಸುತ್ತಾ ಕಲಾವಿದರ ಒಡನಾಡಿಯಾಗಿ, ಅವಿರತ ಸೇವೆ ಸಲ್ಲಿಸುತ್ತಾ ಬಂದಿರುವ ಬಸವರಾಜ ಐರಣಿ ಅವರಿಗೆ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ನಗರಕ್ಕೆ ಕೀರ್ತಿ ತಂದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

ಸಂಘದ ಕಾರ್ಯದರ್ಶಿ ನಾಗರಾಜ ಮುತ್ತಿಗಿ, ಕಲಾವಿದರಾದ ಎಸ್.ಎಲ್. ಚಂದ್ರಶೇಖರಯ್ಯ, ಶಿವಳ್ಳಿ ಮೈಲಪ್ಪ, ಹೆಚ್.ಎಂ.ಮಲ್ಲಿಕಾರ್ಜುನಯ್ಯ, ಕೆ.ಚಂದ್ರಶೇಖರ್, ಹೆಚ್.ಕರಿಯಪ್ಪ, ಕೆ.ಸರೋಜಮ್ಮ, ಉಮಾದೇವಿ, ಶೃತಿ ಮೈಲಪ್ಪ, ಸಿ.ನೇತ್ರ, ರೇಣುಕಾ ಇತರರು ಉಪಸ್ಥಿತರಿದ್ದರು. 

ಅಭಿನಂದನೆಯನ್ನು ಸ್ವೀಕರಿಸಿದ ಬಸವರಾಜ್ ಐರಣಿ ಮಾತನಾಡಿ, ನಿಮ್ಮೆಲ್ಲರ ಹಾರೈಕೆ, ಸಹಕಾರ ಸದಾಶಯಗಳಿಂದ ಕಲಾರಂಗದಲ್ಲಿ ಒಂದಿಷ್ಟು ಸೇವೆ ಮಾಡುವ ಅವಕಾಶ ದೊರೆಯಿತು, ನಿಮ್ಮ ಅಭಿಮಾನಕ್ಕೆ ಸದಾ ಕೃತಜ್ಞನಾಗಿದ್ದೇನೆಂದು ಹೇಳಿದರು.

error: Content is protected !!