ಪುಲ್ವಾಮಾ ಹುತಾತ್ಮರ ಸ್ಮರಣಾರ್ಥ ನಿವೃತ್ತ ಯೋಧರಿಗೆ ಸನ್ಮಾನ

ಹರಿಹರ, ಫೆ.15- ನಗರದಲ್ಲಿಂದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥವಾಗಿ ಸೈನಿಕರ ಅಭಿಮಾನಿಗಳ ಬಳಗ, ಎನ್.ಹೆಚ್. ಶ್ರೀನಿವಾಸ್ ಸ್ನೇಹ ಬಳಗ, ಕ್ಷಿಪ್ರ  ಸ್ಟುಡಿಯೋಸ್, ಇನ್‌ಸ್ಪೈರ್ ಅಸೋಸಿಯೇ ಷನ್, ಲೈಫ್‌ಲೈನ್ ಬ್ಲಡ್ ಬ್ಯಾಂಕ್ ದಾವಣಗೆರೆ ಹಾಗೂ ಹರಿಹರ ತಾಲ್ಲೂಕು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಉಪವಿಭಾಗಧಿಕಾರಿ ಮಮತಾ ಹೊಸಗೌಡ್ರು, ಶಾಸಕ ಎಸ್. ರಾಮಪ್ಪ, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಸಿಪಿಐ ಸತೀಶ್ ಕುಮಾರ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್,  ಎನ್.ಹೆಚ್.  ಶ್ರೀನಿವಾಸ್ ನಂದಿಗಾವಿ, ಉಮ್ಮಣ್ಣ, ಸುಚೇತ್  ಹಾಗೂ ನಿವೃತ್ತ ಸೈನಿಕರು ಹಾಜರಿದ್ದರು.

error: Content is protected !!